ಕಿಮ್ಸ್ ವಸತಿ ಗೃಹದಲ್ಲಿ ಸರಣಿ ಮನೆಗಳ್ಳತನವಾದರು ಕಳ್ಳನ ಹಿಡಿಯುವ ಬದಲು ಅಮಾಯಕ ಮನೆಮಾಲೀಕನ ಮೇಲೆ ಪೊಲೀಸ್ ದೌರ್ಜನ್ಯ

Spread the love

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ವಸತಿ ಗೃಹದಲ್ಲಿ ಮನೆ ಕಳವು ಪ್ರಕರಣ ಸಂಬಂಧಿಸಿದಂತೆ ಕಳ್ಳತನ ಪ್ರಕರಣ ಭೇದಿಸಿ ನ್ಯಾಯ ಕೊಡಿ ಎಂದು ಪೊಲೀಸ್ ಮೊರೆ ಹೋದ ಮನೆಯ ಮಾಲೀಕರ ಮೇಲೆಯೇ ದೌರ್ಜನ್ಯ ಎಸಗಿದೆ ಪ್ರಕರಣ ನಡೆದಿದೆ.
ಸೋಮವಾರ ಬೆಳಿಗ್ಗೆ 3.45ರ ವೇಳೆ ವಸತಿ ಗೃಹದಲ್ಲಿನ ಮೂರು ಮನೆಗಳ ಬಾಗಿಲು ಮುರಿದು ಕಳವು ಮಾಡಲಾಗಿದ್ಸು ಒಂದು ತಿಂಗಳ ಹಿಂದೆಯಷ್ಟೇ ಮೂರು ಮನೆ ಕಳವು ಪ್ರಕರಣ ನಡೆದಿತ್ತು. ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ನ್ಯಾಯ ಕೊಡಿ ಎಂದು ಕಳ್ಳತನವಾದ ಮನೆಯ ಮಾಲೀಕರ ಮೇಲೆಯೇ ಪೊಲೀಸರು ಮಾನವೀತೆ ಮೀರಿ ಹಿಗ್ಗಾಮುಗ್ಗ ಎಳೆದಾಡಿ, ಬಾಯಿಗೆ ಬಂದಂತೆ ನಿಂದನೆ ಮಾಡಿ ಪೊಲೀಸ್ ಜೀಪ್ ನಲ್ಲಿಯೇ ಠಾಣೆಗೆ ಕರೆದುಕೊಂಡು ಹೋದರು. ಈ ನಡುವೆ ಪೊಲೀಸರ ಜೊತೆಗೆ ಕೇಲ ಹಿಂದು ಪರ ಸಂಘಟನೆಯ ಮುಖಂಡರು ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಅವರ ಜೊತೆಗೆ ಅವರ ಜೊತೆಗೆ ಸಹ ವಾಗ್ವಾದಕ್ಕೆ ಇಳಿದರು. ಇಷ್ಟೇಲ್ಲಾ ಬೆಳವಣಿಗೆ ಆದ ನಂತರ ಮತ್ತೆ ಹಿಂದು ಪರ ಸಂಘಟನೆಯ ಮುಖಂಡರು ವಿದ್ಯಾನಗರ ಪಿಐ ಮಹಾಂತೇಶ ಹೊಳಿ ವಿರುದ್ಧ ದೂರು ನೀಡಿದ್ದಾರೆ.
ಪೊಲೀಸರು ಇನ್ನು ದೂರು ದಾಖಲಿಸಿಲ್ಲ.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply