Breaking News

ಪಶ್ಚಿಮ ವಿಧಾನ‌‌ ಪರಿಷತ್ ಮತದಾರರು ಈ ಸಲ ಬದಲಾವಣೆ ಬಯಸಿದ್ದು ನನ್ನ ಆಯ್ಕೆ ಖಚಿತ ಬಸವರಾಜ ಗುರಿಕಾರ

Spread the love

ಹುಬ್ಬಳ್ಳಿ; ಪಶ್ಚಿಮ ವಿಧಾನ‌‌ ಪರಿಷತ್ ಮತದಾರರು ಈ ಸಲ ಬದಲಾವಣೆ ಬಯಸಿದ್ದು ನನ್ನ ಆಯ್ಕೆ ಖಚಿತ ಎಂದು ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಧಾರವಾಡ, ಹಾವೇರಿ, ಕಾರವಾರ ಹಾಗೂ ಗದಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ.‌ಶಿಕ್ಷಕರು ಉತ್ತಮವಾದ ರಿಸ್ಪಾನ್ಸ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನನ್ನ ನಾಲ್ಕು ತಿಂಗಳ ಮುಂಚೆಯೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದ್ದರಿಂದ ನಾನು ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸಿದ್ದೇನೆ.
ಅನೇಕ ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರ ಎದುಸುತಿದ್ದು ಕಾಲ್ಪನಿಕ ವೇತನ,‌ಜ್ಯೋತಿ ಸಂಜೀವಿನಿ, ನೆರೆಯ ರಾಜ್ಯಗಳಿಗೆ ಸಿಗುವ ವೇತನ ಮತ್ತು ಸೌಲಭ್ಯ ಸಿಗಬೇಕು, ಹಳೆ ಪಿಂಚಣಿ ಬೇಕಾಗಿದಗದು ಹೊಸ ಪಿಂಚಣಿ ಬೇಡಾ ಎಂದು ಹೋರಾಟ ಮಾಡಲಾಗಿದ್ದು ಇದು ಕರ್ನಾಟಕ ಸರ್ಕಾರ ಎಂದು ಆಗ್ರಹಿಸಿದರು. ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಗಂಗಾಧರ ದೊಡ್ಡವಾಡ,
ಹುಬ್ಬಳ್ಳಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಅನೀಲ ಕುಮಾರ ಪಾಟೀಲ್, ಸದಾನಂಧ ಡಂಗನವರ, ತಿಮ್ನಯ್ಯಾ,ಮುಖಂಡರಾದ ಪ್ರಕಾಶ ಕ್ಯಾರಕಟ್ಟಿ, ಅಲ್ತಾಫ್ ಹಳ್ಳೂರು ಮುಂತಾದವರು ಇದ್ದರು.


Spread the love

About Karnataka Junction

[ajax_load_more]

Check Also

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ

Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …

Leave a Reply

error: Content is protected !!