ಮಿಸ್ಟರ್ ಪ್ರಲ್ಹಾದ್ ಜೋಶಿ ಆರ್ಡರ್ ಎಲ್ಲಿದೆ: ಕಾನೂನು ಸಚಿವ ಪಾಟೀಲ್
ಹುಬ್ಬಳ್ಳಿ:
ಪ್ರತಿ ಚುನಾವಣೆಯಲ್ಲಿ ಬಿಜೆಪಿಯವರು ಮೋಸ ಮಾಡ್ತೀದಾರೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರಧಾನಿ ನರೇಂದ್ರಮೋದಿಯವರು ಕೂಡಾ ಯೋಜನೆ ಬಗೆಹರಸ್ತೀನಿ ಅಂದಿದ್ರು
ಅವರು ಏನೂ ಮಾಡಲಿಲ್ಲ,ಯಡಿಯೂರಪ್ಪ ನೆಹರು ಮೈದಾನದಲ್ಲಿ ಪತ್ರ ತೋರಿಸಿದ್ರು.
ಗೋವಾ ಸಿಎಮ್ ರ ಪತ್ರ ಬರೆದ ತೋರಿಸಿದ್ದರು ಪ್ರಲ್ಹಾದ್ ಜೋಶಿಯವರು ವಿಜಯೋತ್ಸವ ಆಚರಣೆ ಮಾಡಿದ್ರು
ಯೋಜನೆಗೆ ಅನುಮತಿ ಸಿಕ್ಕಿದೆ ಎಂದು ವಿಜಯೋತ್ಸವದ ಆಚರಣೆ ಮಾಡಿದ್ರು
ಮಿಸ್ಟರ್ ಪ್ರಲ್ಹಾದ್ ಜೋಶಿ ಆರ್ಡರ್ ಎಲ್ಲಿದೆ ಎಂದ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
75 ದಿನದಲ್ಲಿ ಕಾಮಗಾರಿ ಆರಂಭ ಮಾಡೋದಾಗಿ ಜೋಶಿ ಹೇಳಿದ್ರು..
ಜೋಶಿಯವರೇ ಫಾರೆಸ್ಟ್ ಕ್ಲೀಯರೆನ್ಸ್ ಎಲ್ಲಿದೆ.
ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಕೆಲ ಮಾಹಿತಿ ಗೌಪ್ಯವಾಗಿ ಇಡಲಾಗಿದೆ.
ಬಹಳ ನೋವಾಗಿದೆ ಎಂದರು.
*ರಾಜ್ಯದಲ್ಲಿ ಎಲ್ಲ ಗ್ಯಾರಂಟಿ ಜನರಿಗೆ ತಲುಪಿವೆ* ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಈಗಾಗಲೇ ಜನರಿಗೆ ತಲುಪಿದ್ದು ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡಲು ಒಲವಿದೆ.
ಐದು ಗ್ಯಾರಂಟಿಗಳಲ್ಲಿ ಬ್ರಷ್ಟಾಚಾರ ನುಸಳಿಲ್ಲ ಕಳಸಾ ಬಂಡೂರಿ ಯೋಜನೆ ಮಾತಾಡದೆ ಚುನಾವಣೆ ಇಲ್ಲಬಿಜೆಪಿಯವರಿಗೆ ಮೋಸ ಮಾಡೋದಕ್ಕೆ ಕಳಸಾ ಬಂಡೂರಿ ಯೋಜನೆ ಸಿಕ್ಕಿದೆ
ನಿಮಗೆ ವೋಟ್ ಕೇಳೋಕೆ ನೈತಿಕತೆ ಇಲ್ಲಮಲಪ್ರಭಾ ನೀರು ಕುಡಿಯೋರ ಮತ ಕೇಳೋಕೆ ನಿಮಗೆ ನೈತಿಕತೆ ಇಲ್ಲ ಎಂದ ಪಾಟೀಲ್..ಉತ್ತರ ಕರ್ನಾಟಕದಲ್ಲಿ 12 ಸ್ಥಾನದಲ್ಲೂ ನಾವ ಗೆಲ್ತೀವಿ. ಈ ಬಾರಿ ಗ್ಯಾರಂಟಿ ಎಫೆಕ್ಟ್ ನಿಂದ ನಾವ 12 ಸ್ಥಾನ ಸ್ವೀಪ್ ಮಾಡ್ತೀವಿ
ಮತದಾರರರನ್ನು ಒಲೈಕೆ ಮಾಡಲು ಕುರ್ಚಿ ಹೋಗತ್ತೆ ಅಂತಾ ಭಾಷಣ ಮಾಡಬೇಕಾಗತ್ತೆ.ಅದು ಸಹಜ ಆಗಿದೆ ಎಂದರು. ಇನ್ನು ಇದೇ ಸಮಯದಲ್ಲಿ ಮಾತನಾಡಿದ ಅವರು
ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಬಂದಿಲ್ಲ ಎಂದ ಎಚ್ ಕೆ ಪಾಟೀಲ್.
ನಮಗೆ ಅತ್ಯಂತ ಆತ್ಮ ವಿಶ್ವಾಸ ಇದೆ.
ನಾವು ಉತ್ತರ ಕರ್ನಾಟಕದಲ್ಲಿ 12 ಸ್ಥಾನ ಗೆಲ್ತೀವಿ ಎಂದರು