ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಕಾರ್ಯಸಾಧನೆ ಮನವರಿಕೆ
ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಧಾರವಾಡ ಶಹರಾದ ದಾನೇಶ್ವರ ನಗರ ವಾರ್ಡ್ ನಂಬರ್ 23ರಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಕಾರ್ಯಸಾಧನೆಗಳನ್ನು ಸವಿಸ್ತಾರವಾಗಿ ತಿಳಿಸಲಾಯಿತು.
ನಂತರ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು 2024 ಕೆ ಪ್ರಚಂಡ ಬಹುಮತದಿಂದ ಆರಿಸಿ ಬರುತ್ತಾರೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂಜಯ್ ಕಪಟರ, ಸುಖದೇವ್ ಬಾಡಿಗೆ, ಸ್ವಪ್ನಿಲ್ ಸಾಬ್ಳೆ,ರಾಜು ಕಲಗೌಡ, ರೂಪಾ ಈರೇಶನವರ್, ಕಿರಣ್ ಡುಮ್ನವರ್, ಅನಿಲ್ ಕಪಟಕರ್, ಅಭಿಲಾಶ್ ಲೋಕಂಡೆ, ಸೋಮನ್ ಗೌಡ ನೆಹರು ಕಾಲೋನಿ ಅಧ್ಯಕ್ಷರಾದ ವೀರಭದ್ರಪ್ಪ ಕೋರಿ, ಬಸವರಾಜ್ ಗಡಾದ್ ಉಡುಪಿ ಶೇಖರ್ ದೇವಾಡಿಗ ಮುಂತಾದವರು ಭಾಗವಹಿಸಿದ್ದರು