ಮದ್ಯಪ್ರಿಯರಿಗೆ ಇದೊಂದು ಬೇಸರದ ಸಂಗತಿ- ಸಾರಾಯಿ ಬಾಟಲಿ ಸಾಲಾಗಿ ನಾಶ ಮಾಡಿದ ಪೊಲೀಸರು

Spread the love

ಆಂಧ್ರಪ್ರದೇಶ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಆಂಧ್ರಪ್ರದೇಶದ ಕೃಷ್ಣ ಜಿಲ್ಲಾ ಪೊಲೀಸರು ಅವುಗಳನ್ನು ನಾಶಪಡಿಸಿದ್ದಾರೆ.
ಕೃಷ್ಣ ಜಿಲ್ಲೆಯ 33 ಪೊಲೀಸ್ ಠಾಣೆಗಳಲ್ಲಿ ದಾಖಲಾದ 800 ಪ್ರಕರಣಗಳ ಬೆನ್ನತ್ತಿದ ಪೊಲೀಸರು, ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ್ ಬಾಬು ಅವರ ನೇತೃತ್ವದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 5,900 ಮದ್ಯದ ಬಾಟಲಿಗಳು ದೊರೆತಿವೆ.
ಇವುಗಳಲ್ಲಿ ಅನೇಕ ಬಾಟಲಿಗಳು ಅವಧಿ ಮೀರಿದ್ದಾಗಿದೆ ಹಾಗೂ ಸೋರಿಕೆಯಾಗುತ್ತಿದ್ದ ಬಾಟಲಿಗಳಾಗಿವೆ. ಹೀಗಾಗಿ ಇಂತಹ ಬಾಟಲಿಗಳನ್ನು ನಾಶ ಮಾಡಲಾಗಿದೆ. ರಾಜ್ಯದ ಗಡಿಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಮದ್ಯ ಉತ್ಪಾದನೆ ಮತ್ತು ಸಾಗಣೆ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply