Breaking News

ಹುಧಾ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮನೆಯಲ್ಲಿ ಕಳವು

Spread the love

ಹುಬ್ಬಳ್ಳಿ: ಬಿಜೆಪಿ ಮುಖಂಡ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ವೀರಣ್ಣ ಸವಡಿ ಅವರ ತಂದೆ ಸಂಗಪ್ಪ ಅವರ ಆರೈಕೆ ಮಾಡುತ್ತಿದ್ದ ಹಾವೇರಿ ಮೂಲದ ವ್ಯಕ್ತಿ, ಅವರ ಮನೆಯಲ್ಲಿದ್ದ ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ವಾಚ್‌ಗಳನ್ನು ಕಳವು ಮಾಡಿದ್ದಾನೆ.ವೀರಣ್ಣ ಸವಡಿ ನೀಡಿದ ದೂರಿನ ಮೇರೆಗೆ ಸವಣೂರು ತಾಲ್ಲೂಕಿನ ಬದ್ನಿ ತಾಂಡಾದ ಅರುಣ ನಾಯ್ಕ ವಿರುದ್ಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೀರಣ್ಣ ಅವರು ವಯಸ್ಸಾದ ತಂದೆಯವರ ಆರೈಕೆ ಮಾಡಲೆಂದು ಅರುಣನನ್ನು ನೇಮಕ ಮಾಡಿಕೊಂಡಿದ್ದರು. ಮನೆಯವರ ವಿಶ್ವಾಸಗಳಿಸಿಕೊಂಡಿದ್ದ ಅವನು, ಸಂಗಪ್ಪ ಒಬ್ಬರೇ ಮನೆಯಲ್ಲಿ ಇದ್ದಾಗ ಕಪಾಟಿನಲ್ಲಿದ್ದ ₹1.32 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಸಾವಿರ ನಗದು ಹಾಗೂ ₹5 ಸಾವಿರ ಮೌಲ್ಯದ ಎರಡು ವಾಚ್‌ಗಳನ್ನು ಕಳವು ಮಾಡಿದ್ದಾನೆ.


Spread the love

About Karnataka Junction

[ajax_load_more]

Check Also

ಕೇಂದ್ರ ಬಜೆಟ್ ವಿರೋಧಿಸಿ ಪ್ರತಿಭಟನೆ: ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳ ಆಕ್ರೋಶ*

Spread the loveಹುಬ್ಬಳ್ಳಿ: ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರೈತರಿಗೆ ಹಾಗೂ ಕಾರ್ಮಿಕ ವರ್ಗದ ಜನರಿಗೆ ಯಾವುದೇ ಪೂರಕವಾದ ಯೋಜನೆ …

Leave a Reply

error: Content is protected !!