ಹುಬ್ಬಳ್ಳಿ: ನಗರದ ನೇಕಾರ ನಗರ ಎಸ್ ಎಸ್ ಕೆ ಸಮಾಜ ಪಂಚ್ ಟ್ರಸ್ಟ್ ಅಧ್ಯಕ್ಷರಾದ ಮೋತಿಲಾಲಸಾ ಮಿಸ್ಕಿನ್ ಅವರ ನೇತೃತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯ ನಡೆಸಲಾಯಿತು.
ಎಸ್ ಎಸ್ ಕೆ ಸಮಾಜದ ನೇಕಾರನಗರ್ ಪಂಚ್ ಟ್ರಸ್ಟ್ ಸಂಯೋಗದಲ್ಲಿ ಶ್ರೀ ಜಗದಂಬಾ ದೇವಿಯ ಆರತಿ ಪೂಜೆಯ ಪಾಲಿಕೆಯೋತ್ಸವ ಪ್ರಯುಕ್ತ ಲೋಕಸಭಾ ಪೂರ್ವಭಾವಿ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿ ರಾಜು ಅನಂತ ನಾಯಕವಾಡಿ ಭೇಟಿ ನೀಡಿ ಶ್ರೀಜಗದಂಬಾ ದೇವರ ಆಶೀರ್ವಾದ ಪಡೆದು ಪೂಜೆಸಲ್ಲಿಸಿದರು. ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಎಸ್ ಎಸ್ ಕೆ ಸಮಾಜದ ಮತದ ಬಾಂಧವರು ಅಸಹಾಯಕ ಅಸಕ್ತರಾಗಿ ಸಾಮಾಜಿಕ ಆರ್ಥಿಕವಾಗಿ ಕಡಬಡುವರಾಗಿ ಅಭಿವೃದ್ಧಿ ಪರ ಏಳಿಗೆಗಾಗಿ ಕೊರತೆ ಕಾಣುತ್ತಿದ್ದು.ಮತ್ತು ಸಮಾಜ ಹಿಂದುಳಿದ ವರ್ಗ ಹಿಂದುಳಿದಿದ್ದು ಎಸ್ ಎಸ್ ಕೆ ಸಮಾಜದಲ್ಲೂ ಸಮರ್ಥಕ ವಾದ ನಾಯಕರ ಕೋರುತ್ತೆ ಎದ್ದು ಕಾಣುವಂತ ಪರಿಸ್ಥಿತಿ ಇದ್ದು.ಕರ್ನಾಟಕ ರಾಜ್ಯದಂತ ಎಸ್ ಎಸ್ ಕೆ ಸಮಾಜ 14 ರಿಂದ 15 ಲಕ್ಷ ವರೆಗೂ ಸುಮಾರು ಜನಸಂಖ್ಯೆ ಇದ್ದರೂ ಇಲ್ಲಿವರೆಗೂ ಸಮಾಜದ ಜನಗಣತಿ ಆಗುತ್ತಿಲ್ಲ ಇದು ನಮ್ಮೆಲ್ಲರ ದುರ್ದೈವ.ಎಸ್ ಎಸ್ ಕೆ ಸಮಾಜದ ಕರ್ನಾಟಕದಲ್ಲಿ ಒಬ್ಬ ಅಭ್ಯರ್ಥಿನಾದರೂ ಶಾಸಕರು ಹಾಗೂ ಲೋಕಸಭಾ ಅಭ್ಯರ್ಥಿಯಾಗಿ ಕರ್ನಾಟಕ ರಾಜ್ಯದಲ್ಲಿ ಆಯ್ಕೆ ಆಗದೆ ಇರುವುದನ್ನು ನೋಡಿದರೆ ನಿಜಕ್ಕೂ ನೋವಿನ ಸಂಗತಿ ಮತ್ತು ಶಾಸಕರು ಸಂಸದರು ಚುನಾವಣೆಯ ವಿಶೇಷವಾಗಿ ಸಮಾಜದ ಅಭ್ಯರ್ಥಿಗಳಿಗೆ ಮೊದಲಿನ ಆದಿತ್ಯವನ್ನು ನೀಡಿ ಬಹು ಮತದಿಂದ ಆರಿಸಿ ಕಳಿಸುವರೆಗೂ ಎಸ್ ಎಸ್ ಕೆ ಸಮಾಜ ಅಭಿವೃದ್ಧಿ ಕಡೆ ಸಾಗಲು ಸಾಧ್ಯವಿಲ್ಲ. ಎಂದು ನೇಕರ್ ನಗರ ಪಂಚ್ ಟ್ರಸ್ಟ್ ಅಯೋಜಿಸಿದ ಲೋಕಸಭಾ ಪೂರ್ವಭಾವಿ ಸಭೆ ಕಾರ್ಯಕ್ರಮ ಉದ್ದೇಶಿಸಿ ಲೋಕಸಭಾ ಅಭ್ಯರ್ಥಿ ರಾಜು ಅನಂತ ನಾಯಕವಾಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನೇಕಾರನಗರ ಎಸ್ ಎಸ್ ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಮೋತಿಲಾಲಸಾ ಮಿಸ್ಕಿನ. ಲೋಕಸಭಾ ಅಭ್ಯರ್ಥಿ ರಾಜು ಅ ನಾಯಕವಾಡಿ. ಪಂಚ ಪ್ರಮುಖರು ವಿಠ್ಠಲಸಾ ಮಿಸ್ಕಿನ. ಸಾಮಾಜಿಕ ಹೋರಾಟಗಾರ ಆನಂದ ದಲಬಂಜನ.ಮುಖಂಡರು ವಸಂತ ಹಬೀಬ. ಪಂಚ ಪ್ರಮುಖರು.ಹಾಗೂ ಮಹಿಳಾ ಮಂಡಲ. ಯುವಕರ ಮಂಡಲ ಸಾರ್ವಜನಿಕರು ಉಪಸ್ಥಿತಿಯಲ್ಲಿದ್ದರು.*
