Breaking News

ಎಟಿಎಂ ಕಾರ್ಡ್ ಬದಲಿಸಿ ವಂಚನೆ- ವಂಚಕನ ಬಂಧನ

Spread the love

ಹಾವೇರಿ: ಎಟಿಎಂಗಳಲ್ಲಿ ಸಹಾಯ ಮಾಡುವುದಾಗಿ ಮೋಸ ಮಾಡುತ್ತಿದ್ದ ಆರೋಪಿಯನ್ನು ಹಿರೇಕೆರೂರು ತಾಲೂಕಿನ ಹಂಸಭಾವಿ ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಅಲಿಯಾಸ್ ನಿತ್ಯಾನಂದ ಮುನಿಯಪ್ಪನವರ್(26) ಬಂಧಿತ.
ಈತ ಎಟಿಎಂಗಳಿಗೆ ಹಣ ತೆಗೆಯಲು ಬರುವ ಜನರಿಗೆ ಸಹಾಯ ಮಾಡುವಂತೆ ನಟಿಸಿ, ಪಿನ್‌ಕೋಡ್ ಪಡೆದು ಕಾರ್ಡ್​ ಬದಲಿಸುತ್ತಿದ್ದ. ನಂತರ ಬೇರೆ ಪಟ್ಟಣಗಳಿಗೆ ಹಣ ಲಪಟಾಯಿಸುತ್ತಿದ್ದ ಎನ್ನುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.
ಜೂ.3ರಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮತ್ತೂರು ಗ್ರಾಮದ ಬೀರಪ್ಪ ಹಂಸಭಾವಿ ಹಣ ತೆಗೆಯಲು ಸ್ಥಳೀಯ ಎಟಿಎಂ ಬಳಿ ಹೋಗಿದ್ದಾರೆ. ಆಗ ಎಟಿಎಂ ಬಳಿ ನಿಂತಿದ್ದ ಆರೋಪಿ ಗಿರೀಶ್, ಬೀರಪ್ಪ ಅವರ ಕಾರ್ಡ್‌ ಪಡೆದು ಹಣ ತೆಗೆದುಕೊಟ್ಟಿದ್ದಾನೆ. ಇದೇ ವೇಳೆ, ಪಿನ್‌ಕೋಡ್ ತಿಳಿದುಕೊಂಡು ಬೇರೆ ಎಟಿಎಂ ಕಾರ್ಡ್​ ನೀಡಿದ್ದನಂತೆ.
ಇದಾದ ಬಳಿಕ ಆರೋಪಿ ರಾಣೆಬೆನ್ನೂರಲ್ಲಿ 20 ಸಾವಿರ ರೂ., ಹರಿಹರದಲ್ಲಿ 20 ಸಾವಿರ ರೂ., ಹಾಗೂ ಶಿಕಾರಿಪುರದಲ್ಲಿ 20 ಸಾವಿರ ರೂ. ಸೇರಿ ಒಟ್ಟು 60 ಸಾವಿರ ರೂ. ತೆಗೆದಿದ್ದಾನೆ. ಈ ಬಗ್ಗೆ ಬೀರಪ್ಪ ಅವರ ಮೊಬೈಲ್‌ಗೆ ಸಂದೇಶ ಬಂದಿದೆ. ಅನುಮಾನಗೊಂಡು ಬ್ಯಾಂಕ್​​ಗೆ ತೆರಳಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣ ಬ್ಯಾಂಕ್ ಮ್ಯಾನೇಜರ್ ಜತೆ ಚರ್ಚಿಸಿ ಅಕೌಂಟ್ ಬ್ಲಾಕ್ ಮಾಡಿಸಿ, ಹಂಸಭಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಗಿರೀಶ್​​​ನನ್ನು ಕರೆತಂದು ವಿಚಾರಣೆಗೊಳಪಡಿಸಿದ್ದು, ಆತ ಎಟಿಎಂನಿಂದ 60 ಸಾವಿರ ರೂ. ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!