Breaking News

ಬಿಇಓ, ಕಚೇರಿ ಅಧೀಕ್ಷಕರ ಮೇಲೆ ಎಸಿಬಿ ದಾಳಿ

Spread the love

ಮೈಸೂರು: ಲಂಚ ಸ್ವೀಕರಿಸುತ್ತಿದ್ದಾಗಲೇ ಹೆಚ್.ಡಿ ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅಧೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಹಾಗೂ ಅಧೀಕ್ಷಕ ಶಂಕರ್ ಮೇಲೆ ಎಸಿಬಿ ದಾಳಿ ಮಾಡಿದೆ.
ನಿವೃತ್ತ ಶಿಕ್ಷಕರೊಬ್ಬರ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ದಾಖಲೆಗಳನ್ನ ನೀಡಲು 9 ಸಾವಿರ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಿವೃತ್ತ ಶಿಕ್ಷಕ ಎಸಿಬಿ ಅವರಿಗೆ ದೂರು ನೀಡಿದ್ದರು. ಅದರಂತೆ ಬಿಇಒ ಚಂದ್ರಕಾಂತ್ 5 ಸಾವಿರ ರೂ. ಲಂಚ ಹಾಗೂ ಶಂಕರ್ 2 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೊಳಪಡಿಸಿ, ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಎಸಿಬಿ ದಕ್ಷಿಣ ವಲಯ ಅಧೀಕ್ಷಕರಾದ ಸಜಿತ್ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ತಮ್ಮಯ್ಯ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ‌.


Spread the love

About Karnataka Junction

[ajax_load_more]

Check Also

ಸಾರಿಗೆ ಸಿಬ್ಬಂದಿಗೆ ಸುರಕ್ಷಾ ಚಾಲಕ ಬ್ಯಾಡ್ಜ್ ಪ್ರದಾನ

Spread the loveNWKSRTC MD ಪ್ರಿಯಾಂಗ್ ಅಭಿನಂದನೆ ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ಹಾಗೂ ಅಪರಾಧ …

Leave a Reply

error: Content is protected !!