Breaking News

ಇಬ್ಬರನ್ನು ರಕ್ಷಿಸಲು ಹೋಗಿ 7 ಬಾಲಕಿಯರು ನೀರು ಪಾಲು

Spread the love

ಚೆನ್ನೈ : ತಮಿಳುನಾಡಿನ ಕಡಲೂರು ಸಮೀಪದ ಎ.ಕುಚಿಪಾಳ್ಯಂನಲ್ಲಿ ಗೆದ್ದಿಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂ ನೀರಿನಲ್ಲಿ ಮುಳುಗಿ 7 ಬಾಲಕಿಯರು ಸಾವಿನ ಮನೆ ಸೇರಿದ್ದಾರೆ. 10 ರಿಂದ 18 ವರ್ಷದ ಏಳು ಬಾಲಕಿಯರು ನೀರು ತುಂಬಿದ ಆಳವಾದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಆಯನ ಕುರುಂಜಿಪಾಡಿ ಗ್ರಾಮದ ಆರ್.ಪ್ರಿಯದರ್ಶಿನಿ (15), ಅವರ ಸಹೋದರಿ ದಿವ್ಯ ದರ್ಶಿನಿ (10), ಎ.ಮೋನಿಶಾ (16), ಎಂ.ನವನೀತ (18), ಕೆ.ಪ್ರಿಯಾ (18), ಎಸ್.ಸಂಗವಿ (16) ಮತ್ತು ಎಂ.ಕುಮುದಾ ಎಂದು ಗುರುತಿಸಲಾಗಿದೆ.

ಭಾನುವಾರ ಮಧ್ಯಾಹ್ನ 12.45ರ ಸುಮಾರಿಗೆ ಈ ಘಟನೆ ನಡೆದಿದೆ. ಗೆದಿಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂನಿಂದ 300 ಮೀಟರ್ ದೂರದಲ್ಲಿರುವ 15 ಅಡಿ ಆಳದ ಹೊಂಡದ ಬಳಿ ಬಾಲಕಿಯರು ಸ್ನಾನಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ಸ್ನಾನ ಮಾಡಲು ಹಳ್ಳದ ಆಳವಾದ ಭಾಗಕ್ಕೆ ಹೋದಾಗ, ಇಬ್ಬರು ಹುಡುಗಿಯರು ಒಳಗೆ ಸಿಲುಕಿಕೊಂಡರು. ಉಳಿದವರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನಂತರ ಎಲ್ಲರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

ಏಳು ಮಂದಿಯ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿದರು. ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಪ್ರದೇಶದಲ್ಲಿ ಮಣ್ಣು ಪರೀಕ್ಷೆ ನಡೆಸಲಾಗುವುದು ಎಂದು ಪನ್ನೀರಸೆಲ್ವಂ ಸುದ್ದಿಗಾರರಿಗೆ ತಿಳಿಸಿದರು. ಹೊಂಡ ಹೇಗೆ ನಿರ್ಮಾಣವಾಗಿದೆ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುವುದು ಎಂದರು. ಮೃತ ಏಳು ಮಂದಿಯ ಕುಟುಂಬಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಸಚಿವರು ತಲಾ ₹ 25 ಸಾವಿರವನ್ನು ಸಿಎಂ ನೀಡಿದರು.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!