ತರಕಾರಿ ಕತ್ತರಿಸು ಅಂತ ಹೇಳಿದ್ರೆ ಸಹೋದ್ಯೋಗಿಯನ್ನು ಇರಿದ

Spread the love

ಬೆಂಗಳೂರು : ಹೊಟೇಲ್‌ನಲ್ಲಿ ತರಕಾರಿ ಕತ್ತರಿಸುವ ವಿಚಾರವಾಗಿ ಇಬ್ಬರು ಕಾರ್ಮಿಕರ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಬಿಇಎಂಎಲ್‌ ಲೇಔಟ್‌ 5ನೇ ಹಂತದ ಆಂಧ್ರ ಸ್ಟೈಲ್‌ ರೆಸ್ಟೋರೆಂಟ್‌ನಲ್ಲಿ ಈ ಕೃತ್ಯ ನಡೆದಿದ್ದು, ನೇಪಾಳ ಮೂಲದ ಮಿಲನ್‌ ಬಿರಾಲ್‌ ಹತ್ಯೆಗೀಡಾದ ದುರ್ದೈವಿ. ಕೃತ್ಯ ಸಂಬಂಧ ಮೃತನ ಸ್ನೇಹಿತ ಆರ್ಯನ್ ಪುಷ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ನಿನ್ನೆ ಸೋಮವಾರ ಮಧ್ಯಾಹ್ನ ಈ ಇಬ್ಬರ ಮಧ್ಯೆ ತರಕಾರಿ ಹೆಚ್ಚುವ ವಿಚಾರವಾಗಿ ಜಗಳವಾಗಿದೆ. ಈ ಹಂತದಲ್ಲಿ ಕೋಪಗೊಂಡ ಮಿಲನ್‌, ಆರ್ಯನ್‌ ಹೊಟ್ಟೆಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದಿದ್ದಾನೆ.

ನೇಪಾಳ ಮೂಲದ ಮಿಲನ್‌ ಹಾಗೂ ಆರ್ಯನ್, ಕೆಲ ತಿಂಗಳಿಂದ ಈ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಹೋಟೆಲ್‌ನ ಕೊಠಡಿಯಲ್ಲೇ ಇಬ್ಬರು ತಂಗಿದ್ದರು. ತರಕಾರಿ ಕತ್ತರಿಸುವುದು ಸೇರಿದಂತೆ ಅಡುಗೆ ಕೆಲಸಕ್ಕೆ ಸಹಾಯಕರಾಗಿದ್ದರು.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply