ಹುಬ್ಬಳ್ಳಿ: ಪಿಎಸ್ಐ ಪರೀಕ್ಷೆ ಅಕ್ರಮದ ವಿರುದ್ಧ ಧ್ವನಿ ಎತ್ತಿದ ಅಭ್ಯರ್ಥಿಗೆ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿಯ ರವಿಶಂಕರ್ ಎನ್ನುವವರು ಧಾರವಾಡದಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದು, ಪರೀಕ್ಷೆ ಹಗರಣ ಬಯಲಾಗುತ್ತಿದ್ದಂತೆ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರಿನ ಅಸ್ಲಂ ಎನ್ನುವಾತ ವಾಟ್ಸಾಪ್ನಲ್ಲಿ ರವಿಶಂಕರ್ಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಪ್ರಕರಣದ ಆರೋಪಿ ಆರ್ಡಿ ಪಾಟೀಲ್ ಪರ ಮಾತನಾಡಿರುವ ಅಸ್ಲಂ, ಆರ್ಡಿ ಪಾಟೀಲ್ ಹೊರಗೆ ಬಂದ ಮೇಲೆ ನೀನು ಹೇಗೆ ಪಿಎಸ್ಐ ಆಗ್ತೀಯಾ ನೋಡುತ್ತೇವೆ. ಗೌಡ್ರು ನಿನ್ನಿಂದಲೇ ಜೈಲಿಗೆ ಹೋಗಿದ್ದು. ಅಫಜಲಪುರ ಮಂದಿ ಪವರ್ ಏನು ಅಂತಾ ತೋರಿಸುತ್ತೇವೆ ಎಂದು ಬೆದರಿಕೆ ಮೆಸೇಜ್ ಮಾಡಲಾಗಿದೆ.
ಈ ಬಗ್ಗೆ ರವಿಶಂಕರ್ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಅಸ್ಲಂ ವಿರುದ್ಧ ದೂರು ನೀಡಿದ್ದಾರೆ.