ಹುಬ್ಬಳ್ಳಿ: ದಾರಿ ಯಾವುದಯ್ಯ ವೈಕುಂಠಕೆ.. ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಇದೀಗ ಹುಬ್ಬಳ್ಳಿಯ ಸುಜತಾ ಚಿತ್ರಮಂದಿರದಲ್ಲಿ ಶೇ 50 ರಷ್ಟು ರಿಯಾಯ್ತಿ ದರದಲ್ಲಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು
ಚಿತ್ರ ನಿರ್ಮಾಪಕ ಶರಣಪ್ಪ ಕೊಟಗಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಜಾತಾ ಚಿತ್ರಮಂದಿರದಲ್ಲಿ ಬೆಳಿಗ್ಗೆ 11. 30ರ ಪ್ರದರ್ಶನ ಸಂಪೂರ್ಣ ಉಚಿತವಾಗಿ ಪ್ರದರ್ಶನಗೊಳ್ಳಲಿದೆ. ಚಿತ್ರ ಮಂದಿರದ ಮಾಲೀಕರು ಮತ್ತು ನಾವು ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದರು.
ಸುಜಾತಾ ಚಿತ್ರಮಂದಿರದ ಮಾಲೀಕ ಶ್ರೇಯಾ ಸೂಜಿ, ಚಿತ್ರದ ನಿರ್ಮಾಕರು ಹುಬ್ಬಳ್ಳಿಯವರೇ ಆಗಿದ್ದು, ಉತ್ತಮ ಚಿತ್ರ ನಿರ್ಮಿಸಿದ್ದಾರೆ. ಯುವ ಸಮುದಾಯ ಚಿತ್ರ ವೀಕ್ಷಿಸಿ, ಚಿತ್ರ ತಂಡಕ್ಕೆ ಪ್ರೋತ್ಸಾಹ ನೀಡಲು ಮುಂದಾಗಬೇಕು’ ಎಂದರು.
Check Also
ಮಹದಾಯಿಗಾಗಿ ಚಿತ್ರರಂಗ ಒಕ್ಕಟ್ಟಾಗಿ ಹೋರಾಟ ಮಾಡುತ್ತದೆ- ನಟ ಶಿವರಾಜ್ ಕುಮಾರ್
Spread the loveಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗೆ …