ವೃಕ್ಷಮಾತೆಗೆ ಅದ್ದೂರಿಯಾಗಿ ಸನ್ಮಾನ ಮಾಡಿದ ತೆಲಂಗಾಣ ಸಿಎಂ

Spread the love

ಹೈದರಾಬಾದ್‌ : ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್‌ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಿದರು.

111 ವರ್ಷದ ಸಾಲುಮರದ ತಿಮ್ಮಕ್ಕ ಸಂಸದ ಜೋಗಿನಲ್ಲಿ ಸಂತೋಷ್‌ರನ್ನು ಭೇಟಿ ಮಾಡುವುದಕ್ಕೆ ಹೈದರಾಬಾದಿಗೆ ತೆರಳಿದಿದ್ದರು. ಈ ವೇಳೆ ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್‌ ಅವರನ್ನು ಭೇಟಿಯಾಗಿದ್ದಾರೆ. 111 ವರ್ಷಗಳ ಕರ್ನಾಟಕದ ವೃಕ್ಷಮಾತೆಯ ಸೇವೆಗೆ ಗೌರವ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ರು. ಗಿಡಗಳನ್ನು ನೆಡುವುದು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ನಮ್ಮ ಬದುಕನ್ನು ಉಳಿಸಲು ಇರುವ ಮಾರ್ಗ. ಆ ಜವಾಬ್ದಾರಿಗಾಗಿ ತನ್ನ ಜೀವನವನ್ನು ಅರ್ಪಿಸಿದ ತಿಮ್ಮಕ್ಕರನ್ನು ಮೀರಿಸುವ ದೇಶಭಕ್ತರು ಯಾರೂ ಇಲ್ಲ. ತಿಮ್ಮಕ್ಕ ಹೆಚ್ಚು ಕಾಲ ಆಯುಷ್ಯ, ಆರೋಗ್ಯದೊಂದಿಗೆ ಇರಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್‌ ಆಶಯ ವ್ಯಕ್ತಪಡಿಸಿದರು.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply