ಧಾರವಾಡ ; ಪಶ್ಚಿಮ ವಿಧಾನ ಪರಿಷತ್ ಟಿಕೇಟ್ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿಗೋ ಅಥವಾ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೋ ಎಂಬುದನ್ನು ಇನ್ನು ಕೇವಲ ಎರಡು ದಿನಗಳ ಕಾಲ ತಡೆಯಿರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಾಗ ಸುದ್ದಿಗಾರರ ಜೊತೆಗೆ ಮಾತನಾಡಿ ಅವರು, ಪಶ್ಚಿಮ ವಿಧಾನ ಸಭೆ ಚುನಾವಣೆ ಕುರಿತು ಸಾಕಷ್ಟು ತಯಾರಿ ಮಾಡಲಾಗಿದೆ. ಈ ಕುರಿತು ಸಹ ಭಾರತೀಯ ಜನತಾ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಸಹ ಚರ್ಚೆ ಆಗಿದೆ. ಬೆನಹಿಂದೆಯೇ ಈಗ ಪಶ್ಚಿಮ ವಿಧಾನ ಪರಿಷತ್ ಚುನಾವಣಾ ಅಖಾಡಕ್ಕೆ ಇಳಿಯಲು ತಯಾರಿಯನ್ನು ಕೇಲವರು ಮಾಡಿಕೊಂಡಿದ್ದಾರೆ.ಆದರೆ ಭಾರತೀಯ ಜನತಾ ಪಕ್ಷದ ಟಿಕೇಟ್ ಮಾತ್ರ ಯಾರಿಗೆ ಅಂತಾ ಇನ್ನು ಪೈನಲ್ ಆಗಿಲ್ಲ. ಈ ನಡುವೆ ಭಾನುವಾರ ಧಾರವಾಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನು ಎರಡು ದಿನಗಳ ಕಾಯ್ದು ನೋಡಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟವಂತೆ ಮಾತನಾಡಿದರು.
*ಮೋಹನ್ ಲಿಂಬಿಕಾಯಿ ಅಸಮಾಧಾನ ಮುಂದುವರಿಕೆ*
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗು ಮುನ್ನ ಧಾರವಾಡ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿತ್ತು . ಅದೇ ಆಕ್ರೋಶ ಇನ್ನು ಮುಂದುವರಿದಿದೆ. ಯಡಿಯೂರಪ್ಪನವರ ಆಪ್ತ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಈ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.
ಬಿಜೆಪಿ ರಾಷ್ಟ್ರದಲ್ಲಿಯೇ ದೊಡ್ಡ ಪಕ್ಷ, ಈ ಪಕ್ಷಕ್ಕೆ ಇಬ್ಬರೇ ನಾಯಕರಲ್ಲ. ಇವರಿಬ್ಬರಿಂದಲೇ ನಮ್ಮ ಬಿಜೆಪಿ ಪಕ್ಷವಲ್ಲ, ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾರಂತ ಸಾಕಷ್ಟು ಜನರಿದ್ದಾರೆ. ಯಾರೋ ಈ ಇಬ್ಬರು ವ್ಯಕ್ತಿಗಳು ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆಂದರೆ, ನಾವು ತಕ್ಷಣ ಬೇರೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಮೋಹನ್ ಲಿಂಬಿಕಾಯಿ ವಾಗ್ದಾಳಿ ನಡೆಸಿದ್ದರು ಹೊರಟ್ಟಿ ಬಿಜೆಪಿ ಸೇರ್ಪಡೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ..ಹೊರಟ್ಟಿಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಒಪ್ಪೋಣ. ಆದರೆ, ಟಿಕೆಟ್ ನೀಡುವಾಗ ವಿಚಾರ ಮಾಡಿ ನೋಡಿ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ, ನಾನು ಬೇಡ ಅಂದ್ರೆ ಬಿಡಿ, ಸಮರ್ಥವಾಗಿದ್ದವರಿಗೆ ಟಿಕೆಟ್ ನೀಡಿ. ಪಕ್ಷ ಬೆಳೆಯಬೇಕೆಂದರೆ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಿ.
ಅದು ಬಿಟ್ಟು ಹೊರಟ್ಟಿಯವರಿಗೆ ಟಿಕೆಟ್ ನೀಡಿದ್ರೆ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ, ಅದು ಆಗಬಾರದು. .
ಶಿಕ್ಷಕರ ವಿರೋಧವಿತ್ತು.ಇದರಿಂದ ಬಸವರಾಜ ಹೊರಟ್ಟಿಯವರಿಗೆ ಸೋಲಿನ ಭಯವಿತ್ತು. ನಮ್ಮದು ರಾಷ್ಟ್ರೀಯ ಪಕ್ಷ, ದೊಡ್ಡ ಮಟ್ಟದಲ್ಲಿ ಸದಸ್ಯರನ್ನ ಹೊಂದಿರುವ ಪಕ್ಷ. ನಾನು ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. ಆದ್ರೆ, ಈಗ ಯಾಕೆ ಹೀಗೆ ಮಾಡಿದ್ರು ಎಂಬುದು ಮಾತ್ರ ನನಗೆ ಗೊತ್ತಿಲ್ಲ. ನಾನು ಎರಡ್ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ.
ಈಗ ಹೊರಟ್ಟಿಯವರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದು ನನಗೆ ಬೇಸರ ತಂದಿದೆ. ನಾನು ಮುಂದೆ ಏನು ಮಾಡಬೇಕು ಎಂಬುದನ್ನು ನಮ್ಮ ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.ಯಾವುದೇ ಕಾರಣಕ್ಕೂ ಬಸವರಾಜ ಹೊರಟ್ಟಿಯವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಡಿ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಬಸವರಾಜ ಹೊರಟ್ಟಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದ್ದರಿಂದ ಈ ಗುದ್ದಾಟ ಯಾವ ಹಂತಕ್ಕೆ ಹೋಗುತ್ತದೆ ಕಾಯ್ದು ನೋಡಬೇಕು
Check Also
ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ
Spread the love ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …