Breaking News

ಸಾಗರದಾಚೆ ಕರುನಾಡ ಕಣ್ಮನಿಗಳ ಮಹಾದಾನ

Spread the love

ದೋಹಾ, ಕತಾರ್ :
ಕರ್ನಾಟಕ ಸಂಘ ಕತಾರ್ ದೋಹಾ ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ವಾರ್ಷಿಕ ರಕ್ತದಾನ ಮತ್ತು ವೈದ್ಯಕೀಯ ತಪಾಸಣೆ ಶಿಬಿರವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಆಯೋಜಿಸಿತ್ತು. ಭಾರತೀಯ ಸಾಂಸ್ಕೃತಿಕ ಕೇಂದ್ರ, ಹಮದ್ ಮೆಡಿಕಲ್ ಕಾರ್ಪೊರೇಷನ್ ಮತ್ತು ಅಲ್ ಅಬೀರ್ ಮೆಡಿಕಲ್ ಸೆಂಟರ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕತಾರ್‌ನ ಭಾರತೀಯ ರಾಯಭಾರಿ ಡಾ. ದೀಪಕ್ ಮಿತ್ತಲ್ ಅವರನ್ನು ಆಹ್ವಾನಿಸಲಾಗಿತ್ತು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ ಪಿ.ಎನ್.ಬಾಬುರಾಜನ್, ಇಂಡಿಯನ್ ಕಲ್ಚರಲ್ ಬೆನೆವಲೆಂಟ್ ಫೋರಂನ ಅಧ್ಯಕ್ಷರು ಶ್ರೀ ವಿನೋದ್ ನಾಯರ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಅಲ್ ಅಬೀರ್ ಮೆಡಿಕಲ್ ಸೆಂಟರ್ ನ ಪ್ರತಿನಿಧಿ ಡಾ.ನಿತ್ಯಾನಂದ್, ಕರ್ನಾಟಕ ಸಂಘ ಕತಾರ್‌ನ ಸಲಹಾ ಸಮಿತಿ ಸದಸ್ಯರಾದ ಶ್ರೀ ವಿ ಎಸ್ ಮನ್ನಂಗಿ, ಶ್ರೀ ಅರುಣ್ ಕುಮಾರ್ ಮತ್ತು ಶ್ರೀ ಎಚ್ ಕೆ ಮಧು, ಕತಾರ್‌ನ ದೋಹಾದಲ್ಲಿರುವ ಸಂಯೋಜಿತ ಕರ್ನಾಟಕ ಸಮುದಾಯ ಸಂಘಟನೆಗಳ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಹಾಗೂ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About Karnataka Junction

[ajax_load_more]

Check Also

*ಮಹಾಕುಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಕುಟುಂಬ ಪುಣ್ಯಸ್ನಾನ*

Spread the loveಹುಬ್ಬಳ್ಳಿ: ವಿಶ್ವ ಪ್ರಸಿದ್ಧ, ಹಿಂದೂ ಧರ್ಮದ ಶ್ರೇಷ್ಠ ಪ್ರಯಾಗರಾಜ್ ಮಹಾಕುಂಭದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ …

Leave a Reply

error: Content is protected !!