Breaking News

ಖಾಕಿ ಮುಂದೆ ವಿಕೃತಿ ಮನಸ್ಥಿತಿ ಹೊರಹಾಕಿದ ಆ್ಯಸಿಡ್ ನಾಗ

Spread the love

ಬೆಂಗಳೂರು : ಯುವತಿ ಮೇಲೆ ಆ್ಯಸಿಡ್ ‌ಹಾಕಿ ವಿಕೃತಿ ಮೆರೆದಿದ್ದ ನಾಗ ಪೊಲೀಸರ ಮುಂದೆ ತನ್ನ ವಿಕೃತಿ ಮನಸ್ಥಿತಿಯನ್ನು ಹೊರಹಾಕಿದ್ದಾನೆ. ಸಾರ್ ಆ್ಯಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ, ಏಳು ವರ್ಷದಿಂದ ಕಾಯ್ತಿದ್ದೀನಿ ಮದುವೆಯಾಗೋಣ ಅಂತಾ ಕೇಳಿದ್ರೆ, ಅಣ್ಣ ಅಂದುಬಿಟ್ಲು‌, ನನಗೆ ಮದುವೆ ಸೆಟ್ಟಾಗಿದೆ ಅಂದುಬಿಟ್ಲು, ಇದ್ರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆ್ಯಸಿಡ್ ಖರೀದಿ ಮಾಡಿದ್ದೆ, ಆದ್ರೆ ಹಾಕಬೇಕು ಅನ್ಕೊಂಡಿರಲಿಲ್ಲ.

ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೊ ಆ್ಯಸಿಡ್ ಹಾಕ್ದೆ. ಈಗಲೂ ಹುಡುಗಿ ಮನೆಯವರು ಹೆಣ್ಣು ಕೊಡ್ತಾರ ಕೇಳಿ ನೋಡಿ ಸರ್ ಅವಳನ್ನ ಮದುವೆಯಾಗ್ತೀನಿ ಅಂತ ಪೊಲೀಸ್ರ ಮುಂದೆ ನಾಗ ಹೇಳಿಕೊಂಡಿದ್ದಾನಂತೆ. ಯಾಕೋ ಆ್ಯಸಿಡ್ ಹಾಕಿದೇ ಅಂತಾ ಪೊಲೀಸ್ರು ಕೇಳಿದ್ರೆ. ನಾನು ಆಸಿಡ್ ಹಾಕಬೇಕು ಅಂತಾ ಅನ್ಕೊಂಡಿರಲಿಲ್ಲ ಸಾರ್. ಅವರ ಮನೆಯವರೇ ಊರು ತುಂಬಾ ಹೇಳ್ಕೊಂಡ್ ಬಂದ್ರು ಎಂದಿದ್ದಾನೆ.

ಆ್ಯಸಿಡ್ ಹಾಕ್ತಾನಂತೆ, ಆ್ಯಸಿಡ್ ಹಾಕ್ತಾನಂತೆ, ಅಂತಾ ಉಯಿಲೆಬ್ಬಿಸಿದ್ರು. ಯಾವಾಗ ಇವ್ರು ಎಲ್ಲಾ ಕಡೆ ಹೇಳ್ಕೊಂಡ್ ಬಂದ್ರೊ ಆಗ ಆ್ಯಸಿಡ್ ಹಾಕ್ದೆ ಅಂತ ನಾಗ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.‌


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!