Breaking News

ಜೀವ ಜಲಕ್ಕಾಗಿ ಬೀದಿಗಿಳಿದು ಹೋರಾಟ ಮಾಡಿದ ಮಾಜಿ ಶಾಸಕ

Spread the love

ಧಾರವಾಡ : ಬೇಸಿಗೆಯಿಂದ ಎಲ್ಲೆಡೆ ನೀರಿನ ಬವಣೆ ಶುರುವಾಗಿದೆ. ನೀರಿಗಾಗಿ ಎಲ್ಲ ಜನರು ಪರದಾಡುತ್ತಿದ್ದಾರೆ. ಆದರೆ ಇತ್ತ ಮಹಾನಗರ ಪಾಲಿಕೆ ಚೆಲ್ಲಾಟದಿಂದ ನಗರವಾಸಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರು ಇದ್ದು ಹತ್ತು ದಿನಗಳಿಂದ ಕುಡಿಯುವ ನೀರು ಬಿಡದ ಕಾರಣ ಅವಳಿ ನಗರದ ಜನ ರೊಚ್ಚಿಗೆದ್ದು ಇಂದು ಬೀದಿಗಿಳಿದಿದ್ರು. ನೀರಿನ ಸಮಸ್ಯೆ ಅರಿತು ಮಾಜಿ ಶಾಸಕರು ಕೂಡ ಬೀದಿಗಳಿದು ಪ್ರತಿಭಟನೆ ನಡೆಸಿದರು.
ಹೌದು, ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಕಳೆದ‌ 10‌ ದಿನಗಳಿಂದ ಕುಡಿಯುವ ನೀರು ಸರಬರಾಜು ಆಗಿಲ್ಲದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ. ಕಾರಣ‌ ಇಂದು ಧಾರವಾಡದ ಗೋವಾ ರಸ್ತೆಯಲ್ಲಿ ಮಾಜಿ ಶಾಸಕರಾದ‌ ಶ್ರೀ ಎನ್.ಹೆಚ್.‌ ಕೋನರಡ್ಡಿ ಅವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭ

Spread the love*ಹುಬ್ಬಳ್ಳಿ:* ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಾರಾ ಬೈಕ್ ರೆಂಟಲ್ ಆರಂಭಗೊಂಡಿದ್ದು ಪ್ರವಾಸಿಗರು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು …

Leave a Reply

error: Content is protected !!