Breaking News

ವ್ಯಾಕ್ಸಿನೇಶನ್​ ಸ್ಟೇಟಸ್ ಬಳಸಿಕೊಂಡು ಉಥೇಯಕುಮಾರ್ ನಲ್ಲತಂಬಿ ಕೋಸ್ಟೆಸ್ ಬಾರ್​ ಪ್ರವೇಶ

Spread the love

ಸಿಂಗಾಪುರ: ಬಾರ್‌ಗೆ ಪ್ರವೇಶಿಸಲು ಕೋವಿಡ್ ಲಸಿಕೆ ಸ್ಥಿತಿ ಬಗ್ಗೆ ಸುಳ್ಳು ಮಾಹಿತಿ ಕೊಟ್ಟ ಪ್ರಕರಣದಲ್ಲಿ ಇಬ್ಬರು ಭಾರತೀಯರನ್ನು ಇಲ್ಲಿನ ನ್ಯಾಯಾಲಯವು ಐದು ದಿನಗಳ ಜೈಲಿಗೆ ಕಳುಹಿಸಿದೆ. ಉಥೇಯಕುಮಾರ್ ನಲ್ಲತಂಬಿ ಮತ್ತು ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್ ಶಿಕ್ಷೆಗೊಳಗಾದವರು.
ಕಿರಣ್​ ಸಿಂಗ್ ರುಘ್​ಬೀರ್ ಮತ್ತು ಆತನ ಸ್ನೇಹಿತೆ ಉಥೇಯಕುಮಾರ್ ನಲ್ಲತಂಬಿಯನ್ನು ಕಳೆದೊಂದು ವರ್ಷದ ಹಿಂದೆ ಪರಿಚಯ ಮಾಡಿಕೊಂಡಿದ್ದರು. ಈ ಮೂವರು ಬಿಕಿನಿ ಬಾರ್​ಗೆ ತೆರಳಲು ಯೋಜಿಸಿದ್ದಾರೆ. ಆದರೆ, ಉಥೇಯಕುಮಾರ್ ನಲ್ಲತಂಬಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಬಿಕಿನಿ ಬಾರ್​ಗೆ ಪ್ರವೇಶ ಸಿಕ್ಕಿಲ್ಲ. ಅಲ್ಲಿಂದ ಹೊರ ಬಂದ ನಂತರ ಕೋಸ್ಟೆಸ್ ಬಾರ್​ ಪ್ರವೇಶಿಸಲು ಒಂದು ಪ್ಲ್ಯಾನ್ ಮಾಡಿದ್ದಾರೆ.
ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್​​ನ ವ್ಯಾಕ್ಸಿನೇಶನ್​ ಸ್ಟೇಟಸ್ ಬಳಸಿಕೊಂಡು ಉಥೇಯಕುಮಾರ್ ನಲ್ಲತಂಬಿ ಕೋಸ್ಟೆಸ್ ಬಾರ್​ ಪ್ರವೇಶಿದ್ದಾರೆ. ಉಥೇಯಕುಮಾರ್ ನಲ್ಲತಂಬಿ ತನ್ನನ್ನು ತಾನು ಕಿರಣ್​ ಸಿಂಗ್ ರುಘ್​ಬೀರ್ ಸಿಂಗ್ ಎಂದು ಹೇಳಿಕೊಂಡಿದ್ದಾನೆ. ಇದನ್ನು ಬಿಕಿನಿ ಬಾರ್ ಮ್ಯಾನೇಜರ್ ಗಮನಿಸಿದ್ದು, ಕೋವಿಡ್ ಲಸಿಕೆ ಬಗ್ಗೆ ಸುಳ್ಳು ಮಾಹಿತಿ ಕೊಟ್ಟ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ 5 ದಿನಗಳ ಜೈಲುಶಿಕ್ಷೆಯನ್ನು ಸಿಂಗಾಪುರದ ನ್ಯಾಯಾಲಯ ವಿಧಿಸಿದೆ.


Spread the love

About Karnataka Junction

[ajax_load_more]

Check Also

ಚಿಕನ್ ಗುನ್ಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ

Spread the loveಚಿಕನ್ ಗುನ್ಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂಟ್ರುವಿ …

Leave a Reply

error: Content is protected !!