ಧಾರವಾಡ;.ಅಲೆಮಾರಿ ಬುಡಕಟ್ಟು ಮೇದಾರ ಮಹಾಸಂಘ ಹಾಗೂ ಶ್ರೀ ಅಮೃತ ಜ್ಞಾನಜ್ಯೋತಿ ಸೇವಾ ಸಂಸ್ಥೆ ಆಶ್ರಯದಲ್ಲಿ ನ. ೧೪ರಂದು ಬೆಳಗ್ಗೆ ೧೧.೩೦ಕ್ಕೆ ನಗರದ ಕೋರ್ಟ್ ವೃತ್ತ ಬಳಿಯ ಭಗಿನಿ ಸಮಾಜದಲ್ಲಿ ಅಲೆಮಾರಿ ಸಮಾಜದ ಜಿಲ್ಲಾ ಮಟ್ಟದ ಸಮಾವೇಶ ಏರ್ಪಡಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಶಿರಹಟ್ಟಿ ತಿಳಿಸಿದರು. ಅತಿಥಿಗಳಾಗಿ ಬಸವರಾಜ ಬೆಟಗೇರಿ, ಗಣೇಶ ಮುಧೋಳ, ಬಾಬು ಮೇದಾ, ಬಸವರಾಜ ಶಿರಹಟ್ಟಿ, ವೆಂಕಟರಮಣಯ್ಯ, ಕಿರಣಕುಮಾರ ಕೊತಗೆರೆ, ಆದರ್ಶ ಯಲ್ಲಪ್ಪ, ಇತರರು ಆಗಮಿಸಲಿದ್ದಾರೆ. ಸದಾನಂದ ಬುಡ್ಡರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಅರುಣ ಹುಬ್ಬಳ್ಳಿ, ವಿಷ್ಣು ಹೆಬ್ಬಳ್ಳಿ, ವೆಂಕಟೇಶ ಎಚ್., ಶಂಕರ ಸವಟಗಿ, ಆನಂದ ಹೆಬ್ಬಳ್ಳಿ, ಪ್ರಕಾಶ ಹೆಬ್ಬಳ್ಳಿ , ಇತರರು ಸುದ್ದಿಗೋಷ್ಠಿಯಲ್ಲಿದ್ದರು.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಕೇಸ್ ನಂಬರ್ …