ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ಭರತ ರಾಮಚಂದ್ರ ಸೂರ್ಯವಂಶಿ ಎಂಬುವರ ಮನೆಯಲ್ಲಿ ಮಧ್ಯರಾತ್ರಿ ಸುಮಾರು ₹8 ಲಕ್ಷ ಮೌಲ್ಯದ 18 ತೊಲೆ ಚಿನ್ನಾಭರಣ ಕಳ್ಳತನವಾಗಿದೆ. ಕಿಟಕಿಯಿಂದ ಕೈಹಾಕಿ ಹಿಂಬಾಗಿಲು ತೆರೆದು ಒಳನುಗ್ಗಿ ಅಲ್ಮೇರಾದಲ್ಲಿದ್ದ ಆಭರಣ ಮತ್ತು ₹300 ನಗದು ದೋಚಿ ಪರಾರಿಯಾಗಿದ್ದಾರೆ. ಸೂರ್ಯವಂಶಿ ಅವರು ಹರ್ಷ ಕಾಂಪ್ಲೆಕ್ಸ್ನಲ್ಲಿ ರೇಡಿಯಂ ಅಂಗಡಿ ಹೊಂದಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ ಕಳವು: ಹಳೇ ಹುಬ್ಬಳ್ಳಿಯ ನಾಗಲಿಂಗ ನಗರದ ಗಿರೀಶ ಶಿಂಧೆ ಮತ್ತು ರಾಜೇಶ ಪವಾರ್ ಎಂಬುವರ ಮನೆಯಲ್ಲಿ ತಲಾ ₹15 ಸಾವಿರ ಮೌಲ್ಯದ ಎರಡು ಮೊಬೈಲ್ಗಳು ಕಳ್ಳತನವಾಗಿವೆ. ಕಳ್ಳರು ಕಿಟಕಿಯಲ್ಲಿ ಕೈ ಹಾಕಿ ಮೊಬೈಲ್ ಫೋನ್ಗಳನ್ನು ದೋಚಿದ್ದಾರೆ.
