Breaking News

ಟೋಕಿಯೊ ಒಲಿಂಪಿಕ್​ ನಲ್ಲಿ ಕ್ರೀಡಾಪಟುಗಳಿಗೆ ಒತ್ತಡ ತರುವುದು ಬೇಡಾ-ಪ್ರಧಾನಿ ನರೇಂದ್ರ ಮೋದಿ

Spread the love

https://youtu.be/JWsozwl1SOk

 

ನವದೆಹಲಿ: ದೇಶಕ್ಕೆ ಕೀರ್ತಿ ತಂದುಕೊಡಲು ಟೋಕಿಯೋ ಒಲಿಂಪಿಕ್​ಗೆ ತೆರಳಲಿರುವ ಎಲ್ಲ ಕ್ರೀಡಾಪಟುಗಳಿಗೆ ಇಡೀ ರಾಷ್ಟ್ರ ಮುಂದೆ ಬಂದು ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಕರೆ ನೀಡಿದ್ದಾರೆ.
74ನೇ ಎಡಿಸನ್ ‘ಮನ್ ಕಿ ಬಾತ್’ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಟೋಕಿಯೊ ಒಲಿಂಪಿಕ್​ಗೆ ಹೋಗುವ ಪ್ರತಿಯೊಬ್ಬ ಕ್ರೀಡಾಪಟು ಕಷ್ಟಪಟ್ಟಿದ್ದಾರೆ, ಬಹಳ ಸಮಯದಿಂದ ಶ್ರಮಿಸಿದ್ದಾರೆ. ಅವರು ಕೇವಲ ಕ್ರೀಡಾಕೂಟಕ್ಕೆ ಹೋಗುತ್ತಿಲ್ಲ, ಆದರೆ ಅವರು ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಟೋಕಿಯೊಗೆ ಹೋಗುತ್ತಿದ್ದಾರೆ. ಅವರು ಜನರ ಹೃದಯಗಳನ್ನು ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಚೀರ್​ ಫಾರ್​ ಇಂಡಿಯಾ..ನಮ್ಮ ಕ್ರೀಡಾಪಟುಗಳ ಮೇಲೆ ಒತ್ತಡ ಹೇರದಂತೆ ನಮ್ಮ ದೇಶದ ನಾಗರಿಕರನ್ನು ನಾನು ಒತ್ತಾಯಿಸಲು ಬಯಸುತ್ತೇನೆ. ಒತ್ತಡದ ಬದಲಿಗೆ ನೀವು ಅವರನ್ನು ಪ್ರೇರೇಪಿಸುವ ಅಗತ್ಯವಿದೆ. #Cheer4India ಹ್ಯಾಶ್‌ಟ್ಯಾಗ್ ಬಳಸಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ಕಳುಹಿಸಬಹುದು ಎಂದರು.
ಟೋಕಿಯೊ ಒಲಿಂಪಿಕ್​ಗೆ ಮೊದಲ ಬಾರಿ ಆಯ್ಕೆಯಾದ ಕ್ರೀಡಾಪಟುಗಳುಕಳೆದ ವರ್ಷ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್​ ಕೋವಿಡ್​ ಸಾಂಕ್ರಾಮಿಕದಿಂದಾಗಿ ಮುಂದೂಡಿಕೆಯಾಗಿತ್ತು. ಇದೀಗ ಜುಲೈ 23ರಿಂದ ಆಗಸ್ಟ್​ 8ರ ವರೆಗೆ ನಡೆಯಲಿದೆ. ನಮ್ಮ ಕ್ರೀಡಾಪಟುಗಳನ್ನು ನಾವು ಒಂದು ದೇಶವಾಗಿ ಹೇಗೆ ಪ್ರೇರೇಪಿಸಬಹುದು ಎಂಬ ಕಲ್ಪನೆ ನಿಮಗೆ ಬಂದರೆ ಅದನ್ನ ನನಗೂ ಕಳುಹಿಸಿ. ನಾವೆಲ್ಲಾ ಒಟ್ಟಾಗಿ ಅವರನ್ನು ಬೆಂಬಲಿಸೋಣ ಎಂದು ಪ್ರಧಾನಿ ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಅಂದಾನಿಮಠ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ಸಂತಾಪ

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ …

Leave a Reply

error: Content is protected !!