ಹುಬ್ಬಳ್ಳಿ: ಬೆಳಗಾವಿಯ 4.9 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಪ್ರಕರಣದ ಬೆನ್ನಲ್ಲೇ ಕಿರಣ್ ವೀರನಗೌಡರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ವೇಷದಲ್ಲಿ ಈತ ಸುಲಿಗೆಗೆ ಇಳಿದಿದ್ದ ಎನ್ನುವ ಮಾಹಿತಿಯನ್ನು ಅನ್ಯಾಯಕೊಳ್ಳಗಾದ ಮಹಿಳೆ ತಡವಾಗಿ ಬಹಿರಂಗಪಡಿಸುವ ಮೂಲಕ ಈತನ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾಳೆ.
ಡಿಸಿಪಿ ಅಂತಾ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದನಂತೆ ಕಿರಣ್ ವೀರನಗೌಡರ. ಕಳೆದ ವರ್ಷ ಹುಬ್ಬಳ್ಳಿಯ ಪ್ರತಿಷ್ಠಿತ ಮಾಲ್ವೊಂದರ ಮೇಲೆ ಅಸಲಿ ಪೊಲೀಸರ ರೀತಿ ನಕಲಿ ಪೊಲೀಸರು ದಾಳಿ ನಡೆಸಿದ್ದರು. ಇದರ ರೂವಾರಿನೇ ಕಿರಣ್ ವೀರನಗೌಡರ. ತಾನು ಡಿಸಿಪಿಯೆಂದು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದ. ಈತನಿಗೆ ಹುಬ್ಬಳ್ಳಿಯ ಓರ್ವ ಎಎಸ್ಐ, ಪಿಸಿ ಸಾಥ್ ನೀಡಿದ್ದರು ಎಂದು ಪಾರ್ಲರ್ವೊಂದರ ಮಹಿಳೆ ಆರೋಪಿಸಿದ್ದಾರೆ.ನಕಲಿ ಪೊಲೀಸರ ಜೊತೆ ಸೇರಿ ಅಸಲಿ ಪೊಲೀಸರು ಎಸಿಪಿ, ಇನ್ಸ್ಪೆಕ್ಟರ್ ಅಂತ ಹೇಳಿ ಪಾರ್ಲರ್ನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಅಪಾರ್ಟ್ಮೆಂಟ್ನಲ್ಲಿ ಕೂಡಿ ಹಾಕಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮಾಲೀಕ ಹಣ ನೀಡಿದ ಮೇಲೆ ಬಿಟ್ಟು ಕಳುಹಿಸಿದ್ದರು. ಈ ಪ್ರಕರಣದಲ್ಲಿ ಹುಬ್ಬಳ್ಳಿಯ ಬಸವರಾಜ ಡಾಸ್ಕೋನವರ್,ಅನಿಲ್ ಹುಗ್ಗಿ ಭಾಗಿಯಾಗಿದ್ದರು ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಬಸವರಾಜ್ ಡಾಸ್ಕೋನವರ್ ಈಗ ಎಎಸ್ಐ ಹಾಗೂ ಅನಿಲ್ ಪಿಸಿಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ. ಇವರು ಇಲಾಖೆಗೆ ಮೋಸ ಮಾಡಿ ನಕಲಿ ಪೊಲೀಸರ ಜೊತೆ ಶಾಮೀಲಾಗಿ ಈ ಹಿಂದಿನ ಕಮೀಷನರ್ಗೆ ಮಾಮೂಲಿ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …