Breaking News

ಹುಬ್ಬಳ್ಳಿ: ಜೈನ ಸಮಾಜದ ಸತ್ಯಮತಿ ಮಾತಾಜಿ ಜೀವಂತ ಸಮಾಧಿ

Spread the love

ಹುಬ್ಬಳ್ಳಿ: ಜೈನ ಸಮಾಜದ ಹಿರಿಯರು ಹಾಗೂ ನವಗ್ರಹ ತೀರ್ಥದ ಆಚಾರ್ಯ ಗುಣಧರನಂದಿ ಮಹಾರಾಜರ ಶಿಷ್ಯೆ ಆರ್ಯಿಕ ಸತ್ಯಮತಿ ಮಾತಾಜಿ ಅವರು ತಮ್ಮ 96ನೇ ವಯಸ್ಸಿನಲ್ಲಿ ಸಮಾಧಿ ಮರಣ ಹೊಂದಿದರು.
ಸತ್ಯಮತಿ ಮಾತಾಜಿ ಜೂನ್‌ 21ರಂದು ಆರ್ಯಿಕ ದೀಕ್ಷೆ ಪಡೆದು ನಿಯಮ ಸಲ್ಲೇಖನ ಧಾರಣೆ ಮಾಡಿದ್ದರು. ಬುಧವಾರ ಬೆಳಗಿನ ಜಾವ ಐದು ಗಂಟೆಗೆ ಹುಬ್ಬಳ್ಳಿ ತಾಲ್ಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದರು. ಸತ್ಯಮತಿ ಮಾತಾಜಿ ಹಿಂದಿನ ಆರು ತಿಂಗಳುಗಳಿಂದ ಪೂರ್ಣ ಆಹಾರವನ್ನು ತ್ಯಜಿಸಿ, ಅಲ್ಪ ಆಹಾರ ಸೇವಿಸುತ್ತಿದ್ದರು. ಸದಾ ಕಾಲ ಜಪತಪಗಳಲ್ಲಿ ತೊಡಗಿರುತ್ತಿದ್ದರು.
ಹುಬ್ಬಳ್ಳಿಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಮಾಜಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ, ನೀಲೇಶ್ ಜೈನ, ದೇವಿಂದ್ರ ಕಾಗೇನವರ, ಶ್ರೀಪಾದ ಬಸ್ತಿ, ಚಂದ್ರಪ್ಪ ಬೆಣ್ಣಿ, ಸಮಸ್ತ ಶ್ರಾವಕ ಶ್ರಾವಕಿಯರು ಸೇರಿದಂತೆ ಸಮಾಜದ ಪ್ರಮುಖರು ಕ್ಷೇತ್ರಕ್ಕೆ ಭೇಟಿ ನೀಡಿ ಮಾತಾಜಿಯ ಅಂತಿಮ ದರ್ಶನ ಪಡೆದು ಶ್ರದ್ಧಾ ನಮನ ಅರ್ಪಿಸಿದರು. 10 ಗಂಟೆ ಸುಮಾರಿಗೆ ವರೂರಿನ ಧರ್ಮಸೇನ ಭಟ್ಟಾರಕರ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ನಡೆಯಿತು. ವರೂರು, ಛಬ್ಬಿ ಹಾಗೂ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!