Breaking News

ಲಾಕ್ ಡೌನ್ ನಿಂದ ಬಾಧಿತರಾದ ಬಡ ಜನರಿಗೆ ಆಮ್ ಆದ್ಮಿ ಪಕ್ಷದಿಂದ ಆಹಾರ ಪೂರೈಕೆ

Spread the love

ಹುಬ್ಬಳ್ಳಿ; ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ವಿಧಿಸಲಾದ ಲಾಕ್ ಡೌನ್ ನಿಂದ ಬಾಧಿತರಾದ ಬಡ ಜನರ ನೆರವಿಗಾಗಿ ಆಮ್ ಆದ್ಮಿ ಪಕ್ಷದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷೆ ಸುನಂದಾ ಕರಡಿಗುಡ್ಡ, ಅವರ ನೇತೃತ್ವದಲ್ಲಿ ಶುಕ್ರವಾರ ಸಿದ್ಧಾರೂಢ ಮಠ ಮತ್ತು ಇಂಡಿ ಪಂಪ್ ನ ಫತೇಶಾ ದರ್ಗಾದ ಸುತ್ತಮುತ್ತಲಿನ  ಪ್ರದೇಶದಲ್ಲಿ ಬಿಸಿ ಊಟ, ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಯಿತು. ಈ ಸೇವೆಯಲ್ಲಿ, ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡು, ದಿನಗೂಲಿ ಇಲ್ಲದೆ ಕಷ್ಟದಲ್ಲಿದ್ದ ಅನೇಕ ಕಾರ್ಮಿಕರಿಗೆ, ವೃದ್ಧರಿಗೆ ಮತ್ತು ಮಕ್ಕಳಿಗೆ ಆಹಾರ ಹಾಗು ಮಾಸ್ಕ್ ಗಳನ್ನು ವಿತರಿಸಿ ಯೋಗ ಕ್ಷೇಮ ವಿಚಾರಿಸಿ, ಆರೋಗ್ಯ ಕಾಪಾಡಿಕೊಳ್ಳಲು, ಸಾಮಾಜಿಕ ಅಂತರ ಕಾಯ್ದುಕೊಂಡು, ತಮ್ಮ ಸುತ್ತ ಮುತ್ತಲಿನ ಜಾಗೆಯನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರುಗಳಾದ ಮೋಹನ್ ಪಾಟೀಲ, ದೀಪಿಕಾ ಮುಥಾ, ಕಸ್ತೂರಿ ಮುರಗೋಡ, ಇಜಾಜ್ ಶೇಕ, ಉಮೇಶ ಮಿರಜ್ಕರ, ವಿಶಾಲ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ದಿಗೆ ನೀಲನಕ್ಷೆ- ಡಾ. ಕ್ರಾಂತಿ ಕಿರಣ್

Spread the love  ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ನಿರ್ಮಾಣದ ಗುರಿಗೆ ಪೂರಕವಾಗಿ ಕೇಂದ್ರದ ವಿತ್ತ …

Leave a Reply

error: Content is protected !!