ಹುಧಾ ಪೊಲೀಸ್ ಕಮೀಷನರೇಟ್ ಲಾ ಆಂಡ್ ಆರ್ಡರ್ ಡಿಸಿಪಿಯಾಗಿ ಕುಶಾಲ್ ಅಧಿಕಾರ ಸ್ವೀಕಾರ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನ ನೂತನ ಉಪಪೊಲೀಸ್ ಆಯುಕ್ತರಾಗಿ (ಕಾನೂನು & ಸುವ್ಯವಸ್ಥೆ ಕುಶಾಲ್ವ ಚೌಕ್ಸೆ ಐಪಿಎಸ್ ಅಧಿಕಾರಿ ಇಂದು ಅಧಿಕಾರ ವಹಿಸಿಕೊಂಡರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಭಿನಂದನೆ ಸಲ್ಲಿಸಿದರು.
ಕುಶಾಲ್ ಚೌಕ್ಸ್ 2018 ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಯಾಗಿದ್ದು. ವಿಧಿವಿಜ್ಞಾನ ಪ್ರಯೋ ಗಾಲಯದ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಈಗ ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸಿಪಿಯಾಗಿ ನೇಮಕ ಮಾಡಲಾಗಿದೆ. ಡಿಸಿಪಿ ಎಂ.ರಾಜೀವ್ ಅವರ ಅಮಾನತು ಹಿನ್ನೆಲೆ ಕುಶಾಲ್ ಅವರನ್ನು ರಾಜ್ಯ ಸರ್ಕಾರ ಇಂದು ನೇಮಕ ಮಾಡಿ ಆದೇಶ ಹೊರಡಿಸಿತ್ತು.