ಆಪ್ ಕೆರ್ಸ್ ಅಭಿಯಾನದಡಿ, ಆಪ್ ನಾಯಕಿ ಕಸ್ತೂರಿ ಮುರಗೋಡ ನಿಂದ ಬಡಜನರಿಗೆ ದವಸ ಧಾನ್ಯ ವಿತರಣೆ

Spread the love

https://youtu.be/jbGIw_dwO4M
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 34ನೆ ವಾರ್ಡ್ ನ ಅಧ್ಯಕ್ಷರಾದ ಕಸ್ತೂರಿ ಮುರಗೋಡ ಮತ್ತು ಸ್ಥಳೀಯ ಬಡಾವಣೆಯ ಮುಖ್ಯಸ್ಥರಾದ ಶ್ರೀ ಸಾಲಿಮಠ ಅವರ ನೇತೃತ್ವದಲ್ಲಿ, ಹುಬ್ಬಳ್ಳಿಯ ಏಕತಾ ಕಾಲೋನಿಯ ಬಡ ಜನರನ್ನು ಗುರುತಿಸಿ ಶಿಸ್ತು ಬದ್ಧವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಆಡಳಿತ ಸರ್ಕಾರ ಲಾಕಡೌನ್ ನಿಂದ ಆರ್ಥಿಕವಾಗಿ ಕಂಗಾಲಾಗಿರುವ ದೈನಂದಿನ ವೇತನದ ಮೇಲೆ ಅವಲಂಬಿತ ಬಡಜನರನ್ನು ಮರೆತಂತಿದೆ. ಈ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷ ಪ್ರತಿನಿತ್ಯ ಹುಬ್ಬಳ್ಳಿ -ಧಾರವಾಡದಲ್ಲಿ ಆಪ ಕೆರ್ಸ್ ಅಭಿಯಾನದಡಿ ಕಷ್ಟದಲ್ಲಿರುವ ಬಡ ಜನರನ್ನು ಗುರುತಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೆರವು ನೀಡುತ್ತಿದೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಅನಂತಕುಮಾರ್ ಬುಗಡಿ, ಶಿವಕುಮಾರ ಬಾಗಲಕೋಟ, ಲತಾ ಕೊಹಿಲೊ, ಲಕ್ಷ್ಮಣ ನರಸಾಪುರ, ಹಸನಸಾಬ್ ಇನಾಮದಾರ, ಹಿಮಾನ್ಶು ಸಿಂಘ ಮತ್ತಿತರು ಪಾಲ್ಗೊಂಡಿದ್ದರು.


Spread the love

About gcsteam

    Check Also

    10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠ ಕೈಬಿಟ್ಟಿಲ್ಲ

    Spread the loveಬೆಂಗಳೂರು: 10ನೇ ತರಗತಿ ಪಠ್ಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠ ಕೈಬಿಡಲಾಗಿದೆ ಎಂಬ ಊಹಾಪೋಹಕ್ಕೆ …

    Leave a Reply