Breaking News

ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ

Spread the love

ಹುಬ್ಬಳ್ಳಿ : ‌ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜಕ್ಕೆ
ಜಾತಿ ಪ್ರಮಾಣ ಪತ್ರ ನೀಡಿಕೆ ಹಾಗೂ ವಿವಿಧ ಬೇಡಿಕೆ ಈಡೇರಿಸುವ ಉಗ್ರ ಸ್ವರೂಪದ ಹೋರಾಟದ‌ ನಿರ್ಧಾರ ತೆಗೆದುಕೊಳ್ಳಲಾಯಿತು.
ನಗರದ ಖಾಸಗಿ ಹೊಟೇಲ್ ನಲ್ಲಿಂದು ನಡೆದ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜದ ಸಭೆಯಲ್ಲಿ ಒಮ್ಮತ ಅಭಿಪ್ರಾಯಕ್ಕೆ ಬರಲಾಯಿತು. ಸಮಾಜದ ಸಮಾಜ ಮಕ್ಕಳು ಶಿಕ್ಷ ಣದಿಂದ ವಂಚಿತರಾಗುತ್ತಿದ್ದು, ನ್ಯಾಯ ಸಿಗುವರೆಗೂ ಹೋರಾಟ, ಗಂಟಿಚೋರ್‌ ಸಮುದಾಯಕ್ಕೆ ತಮ್ಮ ಜಾತಿಯ ಬಗ್ಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದರು ಎಂದು ಆದೇಶ ಹೊರಡಿಸಿದ್ದರು. ನಮಗೆ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ, ಜಿಲ್ಲಾಧಿಕಾರಿ ಆದೇಶ ಇದ್ದಾಗಲೂ ವಿಚಾರಣೆ ಹಾಗೂ ಸ್ಥಾನಿಕ ಚೌಕಾಶಿ ಮಾಡದೇ ನಮ್ಮ ಸಮುದಾಯದ ಜನರ ಜಾತಿ ಪತ್ರವನ್ನು ವಿನಃ ಕಾರಣ ತಿರಸ್ಕರಿಸುತ್ತಿದ್ದಾರೆ. ತಹಸೀಲ್ದಾರ ಸೇರಿದಂತೆ ಕೇಲ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಒತ್ತಡಕ್ಕಾಗಿ ನಮ್ಮ ಸಮಾಜದವರನ್ನು ಶಿಕ್ಷ ಣದಿಂದ ವಂಚಿತರಾಗಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಸಿಬ್ಬಂದಿಯತ್ತ ತೋರಿಸಿ ವಿನಾಕಾರಣ ವಿಳಂಭ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಸಮಾಜದ ಅನೇಕ ನ್ಯಾಯಯುತ ಬೇಡಿಕೆ ಈಡೇರಬೇಕು ಇನ್ನು ಸಮಾಜದ ಪುನರ್ ಸಂಘಟನೆ ಜೊತೆಗೆ ಸಮಾಜದಲ್ಲಿ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಜಾಗೃತಿ ಕುರಿತು ಚಿಂತನೆ ಮಾಡಲಾಯಿತು.
ಸಮಾಜದವರಿಂದ ನ್ಯಾಯ ಸಿಗುವವರೆಗೂ ಧರಣಿ ,ಹೋರಾಟ ಮಾಡುವು ನಿರ್ಧಾರ ತೆಗೆದುಕೊಳ್ಳಲಾಯಿತು.
ಯಾವುದೇ ಭಿನ್ನಾಭಿಪ್ರಾಯ ಹೊಂದದೆ ಒಂದಾಗಿ ಸಂಘಟಿತ ಹೋರಾಟ ನಡೆಸುವ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು. ಹಿಂದು ಗಂಟಿಚೋರ್ ಹುಬ್ಬಳ್ಳಿ ಘಟಕದ ಸಮಾಜದ ಅಧ್ಯಕ್ಷರಾದ ರಂಗನಾಥ ದೊಡ್ಡಮನಿ, ಮುಖಂಡರಾದ ಚಂದ್ರಶೇಖರ ಹಲಕುರ್ಕಿ, ಮಲ್ಲೇಶ ಚಪ್ಪರಮನಿ, ಕಾಶಿನಾಥ ಅಂಕಲಿ, ಸುಧೀರ್ ಹೊಸೂರು, ಕರುಣಾ ಲೋಹಾರ್, ಭರತರಾಜ್ ಕಟ್ಟಿಮನಿ, ಶಿವಲಿಂಗ ಘಂಟಿ, ಅರ್ಜುನ ಕಟ್ಟೀಮನಿ, ಬಾಲರಾಜ್ ಹಲಕುರ್ಕಿ, ಅಶೋಕ ಕಟ್ಡಿಮನಿ ಸಮಾಜದ ಪ್ರಮುಖ ಮುಂತಾದವರಿದ್ದರು


Spread the love

About Karnataka Junction

[ajax_load_more]

Check Also

ರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕೆ

Spread the loveರಾಜ್ಯ ಪ್ರಶಸ್ತಿಗೆ ಈರಪ್ಪ ಎಮ್ಮಿ ಆಯ್ಕ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ …

Leave a Reply

error: Content is protected !!