ಧಾರವಾಡ: ಧಾರವಾಡ ತಾಲೂಕಿನ ಮಾಧನಭಾವಿ ಗ್ರಾಮದಲ್ಲಿ ಆನಂದ ಪಾಟೀಲ ಹಾಗೂ ಶಿವಕುಮಾರ ಪಾಟೀಲ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಅಮೃತ ದೇಸಾಯಿ ಅವರು ಚಿಕ್ಕಪ್ಪ ಆಶೋಕ್ ದೇಸಾಯಿ ಅವರ ನೇೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ, ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಮೆಚ್ಚಿ ಆನಂದ ಪಾಟೀಲ, ಶಿವಕುಮಾರ ಪಾಟೀಲ ಅವರು ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಅವರನ್ನು ಭಾರತೀಯ ಜನತಾ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಬಾಜಿ ಜಾಧವ, ವಿಠ್ಠಲ ಪೂಜಾರ್, ರಾಜು ಅಂಗಡಿ, ಮಲ್ಲೇಶ ಮಾಳಗಿ, ಬಸವರಾಜ ನಂದಿಹಳ್ಳಿ, ನಿಂಗನಗೌಡ ಹೊಳೆಹಡಗಲಿ, ಮಡು ದೊಡವಾಡ, ಪ್ರಕಾಶ ಪಾಟೀಲ, ಮಂಜು ಪಾಟೀಲ,
ವಿಠಲ ಕಂಬಾರಗಣವಿ, ಬಸವರಾಜ ಕಮ್ಮಾರ, ವೀರೇಶ ಹಟ್ಟಿಹೊಳಿ ಮಂಜು ದೇವರಮನೆ, ಸಿದ್ದಪ್ಪ ದೊಡವಾಡ, ಬಸಪ್ಪ ಸಂಪಗಾವಿ ಉಪಸ್ಥಿತರಿದ್ದರು.
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …