Breaking News

ಹಳೆ ಹುಬ್ಬಳ್ಳಿಯಲ್ಲಿ ಚೋರ್ ಮುನ್ನಾಗೆ ಚಾಕು ಇರಿತ

Spread the love

ಹುಬ್ಬಳ್ಳಿ;ನಗರದ ಆನಂದ ನಗರದ ನಾಗಲಿಂಗನಗರದ ರಸ್ತೆ ಬಳಿ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಹೊಟ್ಟೆಯ ಭಾಗಕ್ಕೆ
ಚಾಕು ಇರಿಯಲಾಗಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ತೌಶೀಪ್ ಸಗೀರ ಅಹಮದ್ ಮುಲ್ಲಾ ಅಲಿಯಾಸ್ ಚೋರ ಮುನ್ನಾ (32) ಗೆ ವಿಶಾಲ ಗಣೇಶ ಹೋಟಕರ ಹಾಗೂ ಪ್ರಮೋದ ಚಂದ್ರಕಾಂತ ಮಾನೆ ಎಂಬುವವರು ಚಾಕು ಇರಿದಿದ್ದು ಚೋರ್ ಮುನ್ನಾ ವಿಶಾಲ ಹಾಗೂ ಪ್ರಮೋದ್ ಗೆ ದುಡ್ಡು ಕೊಡಬೇಕಾಗಿತ್ತು ದುಡ್ಡು ಕೊಡದೇ ಸತಾಯಿಸುತಿದ್ದ ಎನ್ನಲಾಗಿದೆ.
ಚೋರ್ ಮುನ್ನಾ ಅಟೋ ಚಾಲಕನಾಗಿದ್ದು ಪ್ರಮೋದ್ ಹಾಗೂ ವಿಶಾಲ ಜೊತೆಗೆ ಹಣಕಾಸು ವ್ಯವಹಾರಗಳನ್ನ ಹೊಂದಿದ್ದ ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!