ಹುಬ್ಬಳ್ಳಿ;ನಗರದ ಆನಂದ ನಗರದ ನಾಗಲಿಂಗನಗರದ ರಸ್ತೆ ಬಳಿ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಹೊಟ್ಟೆಯ ಭಾಗಕ್ಕೆ
ಚಾಕು ಇರಿಯಲಾಗಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ತೌಶೀಪ್ ಸಗೀರ ಅಹಮದ್ ಮುಲ್ಲಾ ಅಲಿಯಾಸ್ ಚೋರ ಮುನ್ನಾ (32) ಗೆ ವಿಶಾಲ ಗಣೇಶ ಹೋಟಕರ ಹಾಗೂ ಪ್ರಮೋದ ಚಂದ್ರಕಾಂತ ಮಾನೆ ಎಂಬುವವರು ಚಾಕು ಇರಿದಿದ್ದು ಚೋರ್ ಮುನ್ನಾ ವಿಶಾಲ ಹಾಗೂ ಪ್ರಮೋದ್ ಗೆ ದುಡ್ಡು ಕೊಡಬೇಕಾಗಿತ್ತು ದುಡ್ಡು ಕೊಡದೇ ಸತಾಯಿಸುತಿದ್ದ ಎನ್ನಲಾಗಿದೆ.
ಚೋರ್ ಮುನ್ನಾ ಅಟೋ ಚಾಲಕನಾಗಿದ್ದು ಪ್ರಮೋದ್ ಹಾಗೂ ವಿಶಾಲ ಜೊತೆಗೆ ಹಣಕಾಸು ವ್ಯವಹಾರಗಳನ್ನ ಹೊಂದಿದ್ದ ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
