ಹುಬ್ಬಳ್ಳಿ; ದೀಪಾವಳಿ ಹಬ್ಬದ ಪ್ರಯುಕ್ತವಾಗಿ ನಗರದ ಬೆಂಗೇರಿಯಲ್ಲಿ ಕಂಬಳಿ ಓಟವನ್ನ ಅತ್ಯಂತ ತುರುಸಿನಿಂದ ನೆರವೇರಿಸಲಾಯಿತು ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಮಾತನಾಡಿ, ನಮ್ಮತನ ಉಳಿದು ಬೆಳೆಯಬೇಕು, ಕಂಬಳಿ ಓಟವನ್ನು ಅತ್ಯಂತ ಹಳೆಯ ಸಾಂಪ್ರದಾಯಿಕವಾದ ಆಟವಾಗಿದ್ದು ಇಂತಹ ಕ್ರೀಡೆಗಳ ಜೀವಂತಿಕೆಯಿಂದ ನಮ್ನ ಸಂಸ್ಕ್ರತಿ ಇನ್ನಷ್ಟು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಬಿರಪ್ಪಾ ಖಂಡೇಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಮಾಜಿ ಸದಸ್ಯರಾದ ಹೂವಪ್ಪ ದಾಯಗೋಡಿ, ಬಿಜೆಪಿ ಮುಂಖಡರಾದಂತ ರಾಜು ಕಾಳೆ. ಮತ್ತು ಕಲಂದರ್ ಮುಲ್ಲಾ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಗಂತ, ಪಾಂಡು ಕಾಳೆ ಹಾಗೂ ಕುಲ್ಪಿ ಗೆಳೆಯರ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.
