ಹುಬ್ಬಳ್ಳಿ; ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಐದಾರು ತಿಂಗಳು ಬಾಕಿ ಇವೆ. ಈಗಲೇ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮತದಾರರನ್ನ ಸೆಳೆಯಲು ಅನೇಕ ಕಸರತ್ತು ನಡೆದಿವೆ. ಒಂದು ಸಮುದಾಯ ಒಲಿಸುವಿಕೆ ಆಯಕಟ್ಟಿನ ಸ್ಥಳ ಹುಡುಕಾಟ, ಮತದಾರರ ಮನವೊಲಿಸಲು ಆಶೆ ಆಮಿಷ ಹೀಗೆ ಒಂದಲ್ಲಾ ಎರಡಲ್ಲ ಅನೇಕ ರೀತಿಯ ಒಲೈಕೆ ರಾಜಕಾರಣಕ್ಕೆ ನಾಂದಿಯಾಗಿದೆ ಧಾರವಾಡ ಜಿಲ್ಲೆ. ಈಗ ಜಿಲ್ಲೆಯಲ್ಲಿಯೇ ಹೈಲ್ಟೋಜ್ ಕ್ಷೇತ್ರ ಎಣಿಸಿಕೊಂಡಿರುವ ಕಲಘಟಗಿಯಲ್ಲಿ ಈಗ ಕುಕ್ಕರಿನ ಸಿಟಿಯದ್ದೇ ದೊಡ್ಡ ಸದ್ದು ಕಲಘಟಗಿ ತಾಲೂಕು ಹಿರೇ ಹೊನ್ನಳ್ಳಿ ಗ್ರಾಮದಲ್ಲಿ ನಾಗರಾಜ್ ಚಬ್ಬಿ ಗೆಳೆಯರ ಬಳಗದಿಂದ ಕುಕ್ಕರ್ ವಿತರಣೆ ಮಾಡಲಾಗಿದೆ. ಕಲಘಟಗಿ ಮತಕ್ಷೇತ್ರದ ಕಲಘಟಗಿ ಮತ್ತು ಅಳ್ನಾವರ ಭಾಗಕ್ಕೆ ಸುಮಾರು 80 ಸಾವಿರ ಕುಕ್ಕರ್ ಪ್ರತಿಯೊಂದು ಹಳ್ಳಿಯಲ್ಲೂ ಮನೆಮನೆಗೂ ದೀಪಾವಳಿ ಕೊಡುಗೆ ಎಂದು ನೀಡಲಾಗಿದೆ. ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕುಕ್ಕರ್ ವಿತರಣೆಯ ಮಾಡಿದ್ದಾರೆ.
Check Also
ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ
Spread the love ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …