ಪಂಚಮಸಾಲಿ ಸಮಾಜಕ್ಕೆ2ಎ ಮೀಸಲಾತಿ ಸಿಗುವವರೆಗೂ ನಿರಂತರ ಹೋರಾಟ ಧಾರವಾಡ ಜಿಲ್ಲಾ ಪಂಚಮಸಾಲಿ ಸಮಾಜದ ಮುಖಂಡ ಗಂಗಾಧರ ದೊಡವಾಡ

Spread the love

ಹುಬ್ಬಳ್ಳಿ;ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ದೊರೆಯುವವರೆಗೂ ಪಂಚಮಸಾಲಿ ಸಮಾಜದ ಪ್ರಪ್ರಥಮ ಜಗದ್ಗುರು ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸಮಾಜದ ಹಿರಿಯ ಮುಖಂಡ ಎಚ್ಎಸ್ ಶಿವಶಂಕರ ರವರ ಮಾರ್ಗದರ್ಶನದಲ್ಲಿ ನಿರಂತರ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಲಿಂಗಾಯತ ಸಮಾಜದ ಮುಖಂಡ ಗಂಗಾಧರ ದೊಡವಾಡ ಹೇಳಿದರು ಉಣಕಲ್ಲ ಶ್ರೀನಗರ ಬಳಿಯ ಕೇದಾರ ಗ್ರಾನೈಟ್ ಆವಣದಲ್ಲಿ ನಡೆದ ಹುಬ್ಬಳ್ಳಿ ಧಾರವಾಡ ಭಾಗದ ಪಂಚಮಸಾಲಿ ಸಮಾಜ ಬಾಂಧವರ ಸಭೆಯನ್ನುದ್ದೇಶಿಸಿ ಮಾತನಾಡಿದರು ನಮ್ಮ ಹೋರಾಟವು ಯಾವುದೇ ವ್ಯಕ್ತಿಮತ್ತು ಪಕ್ಷ ಪಂಗಡದೊಂದಿಗೆ ಇಲ್ಲ ಆಡಳಿತಗಾರರು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಸಾಕು ಅವರಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದರು ಸಮಾಜದ ಮುಖಂಡರಾದ ರಾಜಣ್ಣ ಕೊಟಗಿ ವೀರಭದ್ರ ಅಮ್ಮಿನಬಾವಿ ವೆಂಕನಗೌಡ ಕಂಠೆಪ್ಪಗೌಡ್ರ ಈಶ್ವರ ಶಿರಸಂಗಿ ವಿರುಪಾಕ್ಷಪ್ಪ ಕಳ್ಳಿಮನಿ ಈರಣ್ಣಾ ಹರಕುಣಿ ನಿಂಗಪ್ಪ ಮಳೆಪ್ಪನವರ ರುದ್ರಪ್ಪ ಹೊಟಗಿ ಮಲ್ಲಿಕಾರ್ಜುನ ಮೆಣಸಿನಕಾಯಿ ರಮೇಶ ಹೊನ್ನಳ್ಳಿ ಗುರುಸಿದ್ದಣ್ಣಾ ಬೆಂಗೇರಿ ಶಿವಾನಂದ ಮಾಯಕಾರ ಮೈಲಾರಿ ಗಂಡೂಡಿ ನಿಂಗಪ್ಪ ಹುಲಿಕಟ್ಟಿ ಶಂಕರ ಮಲ್ಕಣ್ಣವರ ಇದ್ದರು.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply