ಹುಬ್ಬಳ್ಳಿ; ನಗರದ ಸಾಮಾಜಿಕ ಕಾರ್ಯಕರ್ತ ಸೂರಜ್ ಹಾಗೂ ಪೂಜಾ ಅಗಡಿ ಅವರ ಪುತ್ರ ಆಗಸ್ತ್ಯಾ ನ 2 ನೇ ಹುಟ್ಟು ಹಬ್ಬದ ಅಂಗವಾಗಿ ನವನಗರದ ಬ್ಯಾಂಕರ್ಸ್ ಕಾಲೋನಿಯಲ್ಲಿನ ಮೈತ್ರಿ ವೃದ್ಧಾಶ್ರಮದಲ್ಲಿ ವಯೋವೃದ್ಧರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಸಾಮಾನ್ಯವಾಗಿ ನಾವು ಇಂದು ನೋಡಬಹುದು ಪಂಚತಾರಾ ಹೊಟೆಲ್ ಸೇರಿದಂತೆ ಐಷಾರಾಮಿ ಹೋಟೆಲ್ ಹಾಗೂ ದೊಡ್ಡ ದೊಡ್ಡ ಕಲ್ಯಾಣ ಮಂಟಪ ಹಾಗೂ ಮಹಲ್ ಗಳಲ್ಲಿ ಆಡಂಬರವಾಗಿ ಕೇಲವದು ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಆದರೆ ಸಾಮಾಜಿಕ ಕಾರ್ಯಕರ್ತ ಸೂರಜ್ ಅಗಡಿ ತಮ್ಮ ಪುತ್ರನ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಣೆ ಮಾಡಿದ್ದು ವಿಶೇಷ. ಮೈತ್ರಿ ವೃದ್ಧಾಶ್ತಮದ ಅನೇಕ ವಯೋವೃದ್ಧರಿಗೆ ರಕ್ತ ತಪಾಸಣೆ,ಬಿಪಿ, ಶುಗರ್, ಎದಶನೋವು, ಹೃದಯ ಕಾಯಿಲೆ, ಬೆನ್ನು ನೋವು, ಅಲರ್ಜಿ, ಸಕ್ಕರೆ ಕಾಯಿಲೆ ಹೀಗೇ ಅನೇಲ ಕಾಯಿಲೆಗಳನ್ನು ವೈದ್ಯೆ ರೋಹಿಣಿ ಸಾಖರೆ ನೇತೃತ್ವದಲ್ಲಿ
ತಪಾಸಣೆ ಮಾಡಿ ಮತ್ತೆ ಹಾಗೂ ಅಗತ್ಯ ಚಿಕಿತ್ಸೆ ನೀಡಲಾಯಿತು. ಸೂರಜ್ ಮತ್ತು ಪೂಜಾ , ಅಗಡಿ ಬಂಧುಗಳು, ಅನೇಕ ಸಾಮಾಜಿಕ ಸಾಂಸ್ಕೃತಿಕ ಲೋಕದ ಗಣ್ಯರು ಭಾಗವಹಿಸಿದ್ದರು.
Check Also
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ – ರಾಜಣ್ಣ ಕೊರವಿ
Spread the loveಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಆಗಿದೆ ಎಂದು ಶ್ರೀ …