ಹುಬ್ಬಳ್ಳಿ ಉಣಕಲ್ ಬಳಿ ಕಾರ್ , ಬೈಕ್ ಗಳ ನಡುವೆ ಸರಣಿ ಅಪಘಾತ- ಓರ್ವನಿಗೆ ಗಾಯ

Spread the love

ಹುಬ್ಬಳ್ಳಿ; ನಗರದ ಉಣಕಲ್ ಬಳಿ ಕಾರು ಬೈಕ್ ಗಳ ನಡುವೆ ಸರಣಿ ಅಪಘಾತವಾಗಿ ಓರ್ವನಿಗೆ ಗಾಯ ಹಾಗೂ ಕಾರವೊಂದು ಪಲ್ಟಿಯಾದ ಘಟನೆ ಇಂದು ನಡೆದಿದೆ.
ಬೈಕ್ ಸವಾರ ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತಿದ್ದಾಗ ಎದುರಿಗೆ ಬರುತಿದ್ದ ಕಾರವೊಂದು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ ನಂತರ ಇನ್ನೆರಡು ಕಾರು ಹಾಗೂ ಇನ್ನೊಂದು ಬೈಕ್ ಗಳಿಗೆ ಹಿಂದುಗಡೆ ಬರುವಾಗ ಹಿಂಬದಿಯಲ್ಲಿ ನಿಯಂತ್ರಣವಾಗದೇ ಡಿಕ್ಕಿಯಾಗಿವೆ.‌
ಬೈಕ್ ಸವಾರನಗೆ ಕಾರ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸಲಾಗಿದೆ.
ಗಾಯಾಳು ಬೈಕ್ ಸವಾರ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಶಿವಾನಂದ ಉದಗಟ್ಟಿ( 34) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಆದಿಲ್ ಅಹ್ಮದ್ ಧಾರವಾಡ, ಸೋನಾ ಹಾಗೂ ರಿಯಾಝ್ ಎಂಬುವವರು ಇದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply