Breaking News

ಹುಬ್ಬಳ್ಳಿ ಉಣಕಲ್ ಬಳಿ ಕಾರ್ , ಬೈಕ್ ಗಳ ನಡುವೆ ಸರಣಿ ಅಪಘಾತ- ಓರ್ವನಿಗೆ ಗಾಯ

Spread the love

ಹುಬ್ಬಳ್ಳಿ; ನಗರದ ಉಣಕಲ್ ಬಳಿ ಕಾರು ಬೈಕ್ ಗಳ ನಡುವೆ ಸರಣಿ ಅಪಘಾತವಾಗಿ ಓರ್ವನಿಗೆ ಗಾಯ ಹಾಗೂ ಕಾರವೊಂದು ಪಲ್ಟಿಯಾದ ಘಟನೆ ಇಂದು ನಡೆದಿದೆ.
ಬೈಕ್ ಸವಾರ ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತಿದ್ದಾಗ ಎದುರಿಗೆ ಬರುತಿದ್ದ ಕಾರವೊಂದು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿಯಾಗಿದೆ ನಂತರ ಇನ್ನೆರಡು ಕಾರು ಹಾಗೂ ಇನ್ನೊಂದು ಬೈಕ್ ಗಳಿಗೆ ಹಿಂದುಗಡೆ ಬರುವಾಗ ಹಿಂಬದಿಯಲ್ಲಿ ನಿಯಂತ್ರಣವಾಗದೇ ಡಿಕ್ಕಿಯಾಗಿವೆ.‌
ಬೈಕ್ ಸವಾರನಗೆ ಕಾರ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸಲಾಗಿದೆ.
ಗಾಯಾಳು ಬೈಕ್ ಸವಾರ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಶಿವಾನಂದ ಉದಗಟ್ಟಿ( 34) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಆದಿಲ್ ಅಹ್ಮದ್ ಧಾರವಾಡ, ಸೋನಾ ಹಾಗೂ ರಿಯಾಝ್ ಎಂಬುವವರು ಇದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!