Breaking News

ವಿಟ್ಲಪಿಂಡಿ ನೂತನ ರಥ ಸಮರ್ಪಣೆ,‌ವಿಜೃಂಭಣೆ ರಥೋತ್ಸವ

Spread the love

ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ದೇಶಪಾಂಡೆ ನಗರದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ಶುಕ್ರವಾರ ವಿಟ್ಲಪಿಂಡಿ, ನೂತನ ರಥ ಸಮರ್ಪಣೆ ಹಾಗೂ ರಥೋತ್ಸವ ಜರುಗಿತು.
ಕೃಷ್ಣನ ಬೆಳ್ಳಿ ಮೂರ್ತಿಯನ್ನು ಹೊತ್ತ ರಥವನ್ನು ಎಳೆದು‌ ಪುನೀತರಾದರು. ರಥೋತ್ಸವದ ಉದ್ದಕ್ಕೂ ಹುಲಿ ವೇಷಧಾರಿಗಳ ಕುಣಿತ, ಚಂಡೆ- ಮದ್ದಳೆ, ಯುವತಿಯರ ಕೋಲಾಟ ಹಾಗೂ ಕೀಲು ಕುದರೆ ಕುಣಿತವು ಮೆರಗು ತಂದಿತು. ಇದೇ ವೇಳೆ ಅಪಾರ ಭಕ್ತರು
ಭಕ್ತರು ಗೋವಿಂದ. ಗೋವಿಂದ… ಎಂಬ ಉದ್ಘೋಷದೊಂದಿಗೆ ರಥ ಎಳೆದು ಭಕ್ತಿಯ ಪರಾಕಾಷ್ಠೆಯ ಮೆರೆದರು. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಥೋತ್ಸವಕಕ್ಕೆ ರಥದ ಹಗ್ಗ ಎಳೆಯುವ ಮೂಲಕ ರಥೋತ್ಸವಕಕ್ಕೆ ಅದ್ದೂರಿ ಚಾಲನೆ ನೀಡಿದರು. ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲಾ ವಕ್ತಾರ ರವಿ ನಾಯಕ,ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜ ಜನರು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ಸಮಾಜಮುಖಿ ಕಾರ್ಯದಲ್ಲಿ ಯುವಕರು ಪಾಲ್ಗೊಳ್ಳಲು ನಾಗರಾಜ್ ಗಬ್ಬೂರು ಸಲಹೆ

Spread the loveಹುಬ್ಬಳ್ಳಿ; ಮಹಾಶಿವರಾತ್ರಿ ಹಬ್ಬದ ನಂತರ ಅಂಗವಾಗಿ ಸಂಯೋಗ ಗೆಳೆಯರ ಬಳಗದವರು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು‌ ಸತತವಾಗಿ ಐದು …

Leave a Reply

error: Content is protected !!