Breaking News

ಮೋದಿ,ಆದಿ ಗಟ್ಟಸತನ ಕರ್ನಾಟಕಕ್ಕೆ ಇಲ್ಲ- ಪ್ರಮೋದ್ ಮುತಾಲಿಕ್ ಆಕ್ರೋಶ

Spread the love

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾತ್ ಅವರ ಗಟ್ಟಸತನ ಕರ್ನಾಟಕದಲ್ಲಿ ಇಲ್ಲ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಸಂಘ ಪರಿವಾರದಲ್ಲಿ ಭದ್ತ ಕೋಟೆ ಮಂಗಳೂರಿನಲ್ಲಿ ಭಾರತೀಯ ಜನತಾ ಕಾರ್ಯಕರ್ತನ ಕೊನೆಯಾದತೆ ಏನು ಅಂತಾ.
ಕೇಲವೇ ದಿನಗಳ ಹಿಂದೆಶಿವಮೊಗ್ಗದಲ್ಲಿ ಹರ್ಷ ಕೊಲೆಯಾಯಿತು, ಅದೇ ಶಿವಮೊಗ್ಗದಲ್ಲಿಮತ್ತೆ ಇಬ್ಬರು ಹಿಂದೂ ಕಾರ್ಯಕರ್ತ ಮೇಲೆ ಹಲ್ಲೆಯಾಯಿತು. ಈಗ ಮಂಗಳೂರಿನಲ್ಲಿ ಪ್ರವೀಣ್ ನೆಟ್ಯಾರೆ ಕೊಲೆ ಆಯಿತು.
ಇದೊಂದು ಸರಕಾರದ ಬೇಜವ್ದಾರಿತನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಲಿಂದ ಮೇಲೆ ಹಿಂದುಗಳ ಮೇಲೆ ಹಲ್ಲೆ ದೌರ್ಜನ್ಯ ಕೊಲೆ, ದಬ್ಬಾಳಿಕೆ ಮುಂದುವರಿವೆ. ಸರ್ಕಾರ ಮಾತ್ರ ಕಂಡು ಕಾಣದಂತೆ ಇದೆ.
ಮಂಗಳೂರಿನಲ್ಲಿನ ಅಮಾಯಕ ಪ್ರವೀಣ್ ಕೊಲೆಯಾಗಿದೆ. ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಸುತಿದ್ದ ಅಂತಾ ಅಮಾಯಕನನ್ನ ಕೊಲೆ ಮಾಡಲಾಗಿದೆ. ಯಾವುದು ಒಂದು ಹಿಂದಿನ ದ್ವೇಷಕ್ಕೆ ಈ ರೀತಿಯಲ್ಲಿ ಪ್ರತಿಕಾರನಾ ಇದೊಂದು ಅತೀರೇಕದ ಪರಮಾವಧಿ‌
ಸರ್ಕಾರದ ಹಾಗೂ ಪೊಲೀಸ್ ಇಲಾಖೆ ವೈಪಲ್ಯ ಆಗಿದ್ದು
ಭಾರತೀಯ ಜನತಾ ಪಕ್ಷದ ಗಟ್ಟಿ ನೆಲ ಭದ್ರ ಕೋಟೆಯಾಗಿದೆ
ಇದನ್ನ ನೋಡಿದರೆ ಮುಸ್ಲಿಂ ಸಮುದಾಯ ಸೊಕ್ಕಿಗೆ ಬಂದಿದೆ. ‌ ಪದೇ ಪದೇ ಈ ರೀತಿಯ ದೌರ್ಜನ್ಯ ದಬ್ಬಾಳಿಕೆ ನಡೆದರೆ ಏನು ಹೇಳಬೆಕು, ಈಗ ಎಲ್ಲ ಬೆಳವಣಿಗೆ ನೋಡಿದರೆ ಖಂಡಿತವಾಗಿಯೂ ಇದೊಂದು ಸರ್ಕಾರದ ನಿರ್ಲಕ್ಷ್ಯ ಆಗಿದೆ. ಸರ್ಕಾರ ಎಲ್ಲಿಯವರೆಗೆ ಅವರನ್ನು ಹದ್ದು ಬಸ್ತನಿಲ್ಲ ಇಡಲ್ವೋ ಅಲ್ಲಿಯವರೆಗೆ ಇದು ನಡೆತನಾ ಇರುತ್ತದೆ. ಸರ್ಕಾರದ ಈ ನಿರ್ಲಕ್ಷ್ಯ ಭಾವನೆನೇ ಇದಕ್ಕೆ ಕಾರಣ ಎಂದು ಮುತಾಲಿಕ್ ಕಿಡಿ ಕಾರಿದರು. ಇದೊಂದು ಸರ್ಕಾರದ ವಿಫಲತೆ ಮತ್ತು ಹೊಣೆಗೇಡಿತನ. ಒಂದು ಘಟನೆಯಾದ ತಕ್ಷಣ ಬಂದು ಹೋದರೆ ಸಾಲದು ಇಲ್ಲಿ ತಪ್ಪಿತಸ್ಥರನ್ನ ಮಟ್ಟ ಹಾಕಬೇಕು. ಎಲ್ಲಿವರೆಗೆ ಸಾಮಾಜಘಾತಕರ ಮೇಲೆ ಕ್ರಮ ಆಗಬೇಕು. ಕೊಲೆ,ಹಲ್ಲೆ ಆದ ಕೂಡಲೇ ದೊಡ್ಡ ದೊಡ್ಡ ನಾಯಕರು ಬಂದು ಹೋಗಿ ಬಹಳ ಬಹಳ ಮಾತನಾಡಿ ಹೋಗುತ್ತಾರೆ. ನಂತರ ಏನು ಮಾಡಲ್ಲ. ಅದನ್ನು ಆ ಘಟನೆಯನ್ನು ಫಾಲೋ ಅಪ್ ಮಾಡಲ್ಲ. ತಕ್ಷಣ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದುದಿಲ್ಲ ಎಂದರು.
*ಎಸ್ ಡಿ ಪಿ ಐ ಹಾಗೂ ಪಿಎಫ್ ಐ ಸಂಘಟನೆಗಳನ್ನುನಿಷೇಧಿಸಿ*
ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಎಸ್ ಡಿ ಪಿ ಐ ಹಾಗೂ ಪಿಎಫ್ ಐ ಸಂಘಟನೆಗಳನ್ನುನಿಷೇಧ ಮಾಡಬೇಕು ಎಂದು ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದಲ್ಲಿ ಈ ಎರಡು ಸಂಘಟನೆಗಳು ಮೊದಲು ಬ್ಯಾನ್ ಮಾಡಬೇಕು.
ಇಂತಹ ಸಮಾಜಘಾತುಕ ಕೆಲಸದಲದಲಿ ಈ ಸಂಘಟನೆಗಳು ತೊಡಗಿಸಿಕೊಂಡಿವೆ ಎಂದರು.


Spread the love

About Karnataka Junction

[ajax_load_more]

Check Also

*ಮಹಾಕುಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಕುಟುಂಬ ಪುಣ್ಯಸ್ನಾನ*

Spread the loveಹುಬ್ಬಳ್ಳಿ: ವಿಶ್ವ ಪ್ರಸಿದ್ಧ, ಹಿಂದೂ ಧರ್ಮದ ಶ್ರೇಷ್ಠ ಪ್ರಯಾಗರಾಜ್ ಮಹಾಕುಂಭದಲ್ಲಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ …

Leave a Reply

error: Content is protected !!