Breaking News

ಪಾದಯಾತ್ರೆ ಮೂಲಕ ಪಂಚರತ್ನದ ಬಗ್ಗೆ ತಿಳಿಸಿದ ವೀರಭದ್ರಪ್ಪ ಹಾಲಹರವಿ

Spread the love

byಹುಬ್ಬಳ್ಳಿ: ಚುನಾವಣೆಗೆ ಕೆಲವೇ ದಿನಗಳು ಇರುವ ಹಿನ್ನಲೆಯಲ್ಲಿ, ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷದ ಅಭ್ಯರ್ಥಿ ವೀರಭದ್ರಪ್ಪ ಹಾಲಹರವಿ ಅವರು, ಕ್ಷೇತ್ರದ ಜನರ ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಪಂಚರತ್ನದ ಬಗ್ಗೆ ತಿಳಿಸುತ್ತ ಮತಯಾಚನೆ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ಬರುವ, ವಾರ್ಡನಂ 70 ರಲ್ಲಿ ಬರುವ, ಯಲ್ಲಾಪುರ ಓಣಿ,ಸಿದ್ದನಪೇಟ, ಕುಲಕರ್ಣಿ ಗಲ್ಲಿ, ಪಾಟೀಲಗಲ್ಲಿ, ಪಿಂಜಾರ ಓಣಿ, ದೇಸಾಯಿ ಓಣಿ, ಬಂಕಾಪುರ ಚೌಕ್, ದೇಸಾಯಿ ಓಣಿ ನಲ್ಲನಮ್ಮ ದೇವಸ್ಥಾನ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪಾದಯಾತ್ರೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಈರನಗೌಡ ಪಾಟೀಲ, ಪ್ರಕಾಶ ಮರಿತಮ್ಮನವರ, ಮಾಸೂಬಾ ಶೇಖನವರ, ಪಕ್ಷದ ಕಾರ್ಯಕರ್ತರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ

Spread the love  ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …

Leave a Reply

error: Content is protected !!