Breaking News

ಪ್ರಿಯಾ ದೇಸಾಯಿಗೆ ಉತ್ತಮ ಜನ ಬೆಂಬಲ – ವಿವಿಧೆಡೆ ಅಬ್ಬರದ ಪ್ರಚಾರ

Spread the love

ಧಾರವಾಡ : ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ಅವರ ಪತ್ನಿ ಪ್ರಿಯಾ ದೇಸಾಯಿ ಗ್ರಾಮಾಂತರ ಕ್ಷೇತ್ರದ ವನಹಳ್ಳಿ, ತಲವಾಯಿ ಹಾಗೂ ಕನಕೂರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಈ ಮೂರೂ ಹಳ್ಳಿಗಳಲ್ಲಿ ಪ್ರಿಯಾ ದೇಸಾಯಿ ಅವರಿಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು. ಪಾದಯಾತ್ರೆ ನಡೆಸಿ ಮನೆ, ಮನೆಗೆ ತೆರಳಿದ ಪ್ರಿಯಾ ದೇಸಾಯಿ, ಐದು ವರ್ಷಗಳಲ್ಲಿ ಆದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಟ್ಟರು. ಅಲ್ಲದೇ ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಜ್ಯೋತಿ ಗೌಡರ, ದೀಪಾ ಶಿರೂರ, ನಿರ್ಮಲಾ ಹಾವೇರಿ, ರೇಣುಕಾ ಆರೆಣ್ಣವರ, ಈರಮ್ಮ ಕುಬಳ್ಳಿ, ಬಸಮ್ಮ ತಳವಾರ, ಸುಮಾ ನಾವಳ್ಳಿ ಸೇರಿದಂತೆ ನೂರಾರು ಜನ ಮಹಿಳೆಯರು ಪ್ರಿಯಾ ದೇಸಾಯಿ ಅವರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.


Spread the love

About Karnataka Junction

[ajax_load_more]

Check Also

ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್‌

Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …

Leave a Reply

error: Content is protected !!