Breaking News

Spread the love

*ಚುನಾವಣೆ ಬಂದಾಗ ಕಾಂಗ್ರೆಸ್ ದವರಿಗೆ ಹೋರಾಟದ ನೆಪ ಸಿಗುತ್ತವೆ; ಸಚಿವ ಹಾಲಪ್ಪ ಆಚಾರ*

ಹುಬ್ಬಳ್ಳಿ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನವರಿಗೆ ಈಗ ಎಲ್ಲ ಹೋರಾಟಗಳು ನೆನಪಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ವ್ಯಂಗ್ಯವಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಚುನಾಚವಣೆ ಬಂದಾಗೊಮ್ಮೆ ಮೇಕೆದಾಟು ಇಂತಹ ಹೋರಾಟ ಮಾಡುತ್ತಾರೆ. ಅವರದ್ದೆ ಅಧಿಕಾರ ಇದ್ದಾಗ ಏನು ಮಾಡಿಲ್ಲ. ಜನರನ್ನು ಆಕರ್ಷಣೆ ಮಾಡಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ‌. ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ.

2013 ರ ಚುನಾವಣೆ ಮುನ್ನ ಉತ್ತರ ಕರ್ನಾಟಕದ ವಿಷಯಗಳನ್ನು ಇಟ್ಟುಕೊಂಡು ರ‌್ಯಾಲಿ ಮಾಡಿದ್ದರು. ಈಗ ಈ ಕಡೆ ಅವರದ್ದು ಏನು ನಡೆಯುತ್ತಿಲ್ಲ ಹೀಗಾಗಿ ಮೇಕೆದಾಟು ಹಿಡಿದುಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಹೋರಾಟ ಅಷ್ಟೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅಧಿವೇಶನದಲ್ಲಿ ಭಾಗಿಯಾಗಿದ್ದೆ ಆದ್ದರಿಂದ ಧಾರವಾಡಕ್ಕೆ ಬಂದಿರಲಿಲ್ಲ. ಈಗ ಮತ್ತೆ ಇಲ್ಲಿನ ಜನರ ಸಂಪರ್ಕದಲ್ಲಿ ಇರುವುದಾಗಿ ಹೇಳಿದರು.


Spread the love

About Karnataka Junction

[ajax_load_more]

Check Also

ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟದ ಅಧ್ಯಕ್ಷರಿಗೆ ಸನ್ಮಾನ

Spread the loveಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಅಖಿಲ ಭಾರತ …

Leave a Reply

error: Content is protected !!